Monday 9 October 2023

ಧರ್ಮಶ್ರವಣ - ಕೇತಕೀವನ - ಡಿವಿಜಿ

ಅರ್ಥವಾಗದ ಭಾಷೆ ಅಗಿಯಲಾಗದ ಭೋಜ್ಯ
ವೇದವೇದಾಂತಗಳ ಕಂತೆಯೆನಗೆ ಧರ್ಮಶ್ರವಣ 
ತತ್ವೋಪದೇಶವೆಂಬುದು ಬಾಯ ಬಡಿದಾಟ
ನೆಲಕಿಳಿಯದಿರುವ ಮೋಡಗಳ ಗಡಣೆ.

ಮನಸು ವಾಯುವಿನಂತೆ ಚಲಿಪುದೆತ್ತೆತ್ತಲೋ
ಒಂದೆಡೆಯೊಳಿರಲೊಲದು ನೆಲೆಯರಿಯದು
ಶಾಂತಿಯನೆ ಬಯಸಿದೊಡಮಲೆವುದದ ಗಳಿಸದೆಯೆ
ಗೆಲಲೆಳಸಿ ಕಲಿಯದಿಹ ಬಾಲನಂತೆ.

ಮನವೇನು ಪಶುವಲ್ಲ, ಮಾತೇನು ಹುರಿಯಲ್ಲ
ಮನವ ತಿದ್ದುವ ಯುಕುತಿ ಕೊರಲೊಳಿಲ್ಲ
ಮನವೊಂದು ಬಳಿನಿಂದು ಶಮವೊಂದಲದೆ ಸುಕೃತ
ಶಮವಿಲ್ಲದಗೆ ಶಾಸ್ತ್ರವಣಕು, ಮರುಳೆ.

No comments:

Post a Comment