Friday 8 March 2024

ಶ್ರೀ ಕೃಷ್ಣರಾಜೇಂದ್ರ ಒಡೆಯರವರು - ವಸಂತ ಕುಸುಮಾಂಜಲಿ - ಡಿವಿಜಿ

ಶ್ರೀ ಕೃಷ್ಣರಾಜೇಂದ್ರ ಒಡೆಯರವರು - ವಸಂತ ಕುಸುಮಾಂಜಲಿ - ಡಿವಿಜಿ


ನಿಖಿಲಕರ್ಣಾಟಜನಸಂತೋಷಸಾಧನಂ
ಭಾರತಾವನಿಪಾಲಕುಲಕಿರೀಟಂ ।
ಸ್ಮಾರ್ತಲೋಕಾಧಾರಸಿಂಹಪೀಠಸ್ಥಿತಂ
ಆರ್ಯವಿಹಿತಾಚಾರಧರ್ಮಶೀಲಂ ।
ದೇಶಭಾಷಾಪ್ರೇಮಸಂಪೂರ್ಣಮಾನಸಂ
ದೇವಪೂಜಾನಿರತನಮಲಚರಿತಂ ।
ಪೌರಸ್ತ್ಯಪಾಶ್ಚಾತ್ಯವೈದುಷ್ಯಸಂಯೋಗ
ಸಂಜನಿತ ಶುಭಗುಣಾದರ್ಶಮಹಿಮಂ ॥

ಪ್ರಜೆಯ ಸೇವೆಯೆ ದೇವಸೇವೆಯೆಂದರಿತು ಸತತಂ ।
ಚತುರಸಚಿವರನೊಂದಿ ಜನತೆಯೊಳ್‍ ಜಸಮನೊಂದಿ ।
ಸಕಲಸಂಪತ್ಸೌಖ್ಯಯೋಗದಿಂ ಪುಣ್ಯಪಥದೊಳ್‍ ।
ರಾಜಿಸಿದ ರಾಜನೀ ಶ್ರೀಕೃಷ್ಣ ಭೂಮಿಪಾಲಂ ॥

No comments:

Post a Comment