Monday 4 March 2024

ರವೀಂದ್ರನಾಥ ಠಾಕೂರ್‍ - ವಸಂತ ಕುಸುಮಾಂಜಲಿ - ಡಿವಿಜಿ

ರವೀಂದ್ರನಾಥ ಠಾಕೂರ್‍  - ವಸಂತ ಕುಸುಮಾಂಜಲಿ - ಡಿವಿಜಿ




































ರವಿಯರಿಯದ ಮರ್ಮಗಳಂ । 
ಕವಿಯರಿತವನೆಂದು ಲೋಕಮೊರೆವುದು ಪುಸಿಯೇಂ ॥ 
ರವಿ ಬೆಳಗೆ ಬಾಹ್ಯಲೋಕವ । 
ಕವಿ ಬೆಳಗಿಪನಲ್ತೆ ಜನರ ಹೃದಯಾನ್ತರಮಂ ॥ 

ಋಷಿಬಲಮಿಲ್ಲದವಂ ಕವಿ । 
ವೃಷನೆನಿಪುದಶಕ್ಯಮೆಂದು ಬಗೆವುದು ಸಾಜಂ ॥ 
ಋಷಿಹೃದ್ಗತ ಚಿನ್ಮೂರ್ತಿಯ । 
ಸುಷಮಾಪ್ರತಿಫಲಮೆ ಕಾವ್ಯವನಿತಾವಿಭವಂ ॥ 

ಪದಬಾಹುಳ್ಯದಿನಪ್ರಸಿದ್ಧ ಪದವೈಚಿತ್ರ್ಯಾಳಿಯಿಂ ಶ್ಲೇಷೆಯಿಂ । 
ಪದುಳಂಗೊಳ್ವಳದೆಂತು ಕಾವ್ಯವಧು ತಾಂ ಕಾಠಿನ್ಯಮಂ ತೋರಳೇಂ ॥ 
ಹೃದಯಾಬ್ಜಂ ರಸಪೂರ್ಣಮಾಗಿ ಕವಿಯೊಳ್‍ ಪ್ರಜ್ಞಾರುಣೋದ್ದೀಪ್ತಿಯಿಂ । ಪದಸೌಭಾಗ್ಯಮರಂದಮುಣ್ಮೆ ಕವಿತಾಶ್ರೀರೂಪಮುಜ್ಜೃಂಭಿಕುಂ ॥ 

ಜೀವಲೋಕದೊಳಳ್ತಿಯಿಂ ಸಮ । 
ಭಾವದಿಂದಲಿ ವರ್ತಿಸುತ ಪರ । 
ದೇವಲೀಲೆಯೆ ಲೌಕಿಕವ್ಯಾಪಾರಮೆಂದೆಣಿಸಿ ॥ 

ಸಾವಧಾನದಿ ವರ್ಣಿಸುತಲದ । 
ತೀವಿದಾನಂದದಲಿ ತನ್ನೊಳು । 
ಭಾವಿಪಂ ತಾನಲ್ತೆ ಕವಿ ಬೇರೊಂದು ಲೋಕವನು ॥ 

ತಾನೆ ಜಗಂಗಳ ಕಲ್ಪಿಸುತುಂ ಸ್ವಾ । 
ಧೀನತೆಯೊಳ್ಮುದಮೊಂದುತಲೆಂದುಂ ॥ 
ಜ್ಞಾನಧನಂ ಕವಿ ಧೀರನುದಾರಂ । 
ಮಾನಸರಾಜ್ಯಕೆ ರಾಜನೆನಿಪ್ಪಂ ॥

No comments:

Post a Comment