Friday 29 March 2013

DVG 126@ Rasadhwani Kala Kendra

DVG 126 Birth Anniversary @ Rasadhwani Kala Kendra A Report- ಶ್ರೀಕಾಂತ ಶರ್ಮ

ಡಿ.ವಿ.ಜಿ. ಯವರ 126 ನೇ ಜನ್ಮದಿನದ ಪ್ರಯುಕ್ತ ಮಾರ್ಚ್ 17 - 2013 ರಂದು ಬೆಳಿಗ್ಗೆ 10:30 ಕ್ಕೆ, ಬೆಂಗಳೂರಿನ ರಾಜಾಜಿನಗರದ ರಸಧ್ವನಿ ಕಲಾ ಕೇಂದ್ರದಲ್ಲಿ ಶತಾವಧಾನಿ  ಡಾ । ರಾ.ಗಣೇಶ್ ರವರಿಂದ ವಿಶೇಷ ಉಪನ್ಯಾಸ ಏರ್ಪಡಿಸಲಾಗಿತ್ತು.

ಶತಾವಧಾನಿಗಳು ಕೇಂದ್ರದಲ್ಲಿ ನೆರದಿದ್ದ ಡಿ.ವಿ.ಜಿ ಅವರ ಅಭಿಮಾನಿಗಳನ್ನು ಉದ್ದೇಶಿಸಿ -- "ಡಿ.ವಿ.ಜಿ. ಯವರ ಸಾಹಿತ್ಯ ಶೈಲಿ - ಒಂದು ಶಾಸ್ತ್ರೀಯ ವಿವೇಚನೆ." ಕುರಿತಂತೆ ಉಪನ್ಯಾಸ ನೀಡಿದರು. ಡಿ.ವಿ.ಜಿ ಅವರ ಪದ್ಯ, ಗದ್ಯ,ನಾಟಕ, ಅನುಭವ ಕಥನ, ಕಗ್ಗ ಇತ್ಯಾದಿ ನಾನಾ ಪ್ರಕಾರಗಳಲ್ಲಿ ಶಾಸ್ತ್ರೀಯತೆ ಮತ್ತು ವಿಶಿಷ್ಟ ಒಳನೋಟಗಳನ್ನು  ಹಂಚಿಕೊಂಡರು.

ಉಪನ್ಯಾಸದ ನಂತರ ಕೇಂದ್ರದ ಸ್ನೇಹಿತರು ಕಗ್ಗದ ವಾಚನ, ಗಾಯನ ಕಾರ್ಯಕ್ರಮದಲ್ಲಿ ಭಾಗಿಯಾದರು. ಡಿ.ವಿ.ಜಿ  ಅವರ 30 ಕ್ಕೂ ಹೆಚ್ಚು ಪುಸ್ತಕಗಳ ಪ್ರದರ್ಶನ ಏರ್ಪಡಿಸಲಾಗಿತ್ತು.

ರಸಧ್ವನಿ ಕಲಾ ಕೇಂದ್ರದ ಕುರಿತು: ಸಂಗೀತ - ಸಾಹಿತ್ಯ ಇತ್ಯಾದಿ ಲಲಿತ ಕಲೆಗಳ ಮೂಲಕ ಸನಾತನ ಧರ್ಮದ ಸೇವೆಗೆಂದು ಸಮಾನ ಮನಸ್ಕ ಸಹೃದಯರಿಂದ ಸ್ಥಾಪನೆಯಾಗಿರುವ "ರಸಧ್ವನಿ ಕಲಾ ಕೇಂದ್ರ" , ರಾಜಾಜಿನಗರದಲ್ಲಿ ಈ ಕೆಳಕಂಡ ಚಟುವಟಿಕೆಗಳನ್ನು ಏರ್ಪಡಿಸುತ್ತಿದೆ.

* ಕರ್ನಾಟಕ ಶಾಸ್ತ್ರೀಯ ಸಂಗೀತ: ಕಲಿಕೆ, ಕಾರ್ಯಕ್ರಮ, ಕಚೇರಿ.
* ಕುಮಾರವ್ಯಾಸ ಭಾರತ ಇತ್ಯಾದಿ ಕಾವ್ಯಗಳ ವಾಚನ: ಗಮಕ ವಾಚನ ತರಗತಿಗಳು.
* ಗೀತಾಧ್ಯಯನ ಹಾಗು ವೇದಾಧ್ಯಯನ ತರಗತಿಗಳು.
* ಸಂಸ್ಕೃತ ಭಾಷೆ - ಸಂಭಾಷಣ ಶಿಬಿರ, ಸಂಸ್ಕೃತ ಅಧ್ಯಯನ ಕೇಂದ್ರ.

No comments:

Post a Comment