ಆನಂದನಿಧಿ ನೀನು
ಆಕಾಂಕ್ಷೆ ನಾನು
ಅಮೃತವರ್ಷಿಣಿ ನೀನು
ಆಳುಬೀಡು ನಾನು
ನೀನೊರ್ವಳಿಲ್ಲದೆನಗೇನಿರ್ದೊಡೇನು?
ನೀನಿರ್ದೊಡೆನಗೆ ಮತ್ತೇನಿರದೊಡೇನು?
ಸಿರಿಯ ಕಮಲವೆ ನೀನು
ತಿರಿದುಂಬಿ ನಾನು
ಶಶಿಯ ತಿಂಗಳು ನೀನು
ನಿಶಿಮಬ್ಬು ನಾನು
ನಿನ್ನ ಮಧುವಿಂದೆನ್ನ ಹಸಿವು ತೊಲಗುವುದು
ನಿನ್ನ ಕಿರಣದಿನೆನ್ನ ಕುರುಡು ಕಳೆಯುವುದು.
ಸುಳಿವ ಗಾಳಿಯು ನೀನು
ಬಳುಕುವೆಲೆ ನಾನು
ತಿಳಿಹೊಳೆಯ ನೆರೆ ನೀನು
ಕೆಲದ ಹೊಲ ನಾನು
ನಯದಿಂದ ನೀಂ ಸಾರಿ ಬರಲೆನ್ನ ಬಾಳು,
ದಯೆ ತೊರೆದು ನೀನೋಡಲೆನಗೆಲ್ಲ ಪಾಳು.
ವಿಧಿಯ ಲೇಖನಿ ನೀನು
ಬರವ ಹಣೆ ನಾನು
ಅಧಿಕಾರವತಿ ನೀನು
ಅಡಿಯಾಳು ನಾನು
ನಿನ್ನ ತಿಳಿನಗುವೆನ್ನ ಕಣ್ಗಳಿಗೆ ಬೆಳಕು
ನಿನ್ನೊಲಿದ ನುಡಿಯೆನ್ನ ಜೀವಕಿಹ ಬದುಕು.
ಆತ್ಮದೈವವು ನೀನು
ಅರ್ಚಕನು ನಾನು
ಐಶ್ವರ್ಯವತಿ ನೀನು
ಆಶ್ರಿತನು ನಾನು
ಕೊರಗಿ ನಾನಿರೆ ನಿನಗೆ ಸಫಲತೆಯದೆಂತು?
ತೊರೆದು ನೀನಿರಲೆನಗೆ ಪೂರ್ಣತೆಯದೆಂತು?
Devanahalli Venkataramanaiah Gundappa, popularly known as DVG, was a Kannada writer and philosopher. He is best known for Manku Thimmana Kagga
Saturday, 11 November 2023
Friday, 10 November 2023
ಜಯಭಾರತೀ - ಕೇತಕೀವನ - ಡಿವಿಜಿ
ಜಯ ಭಾರತೀ ಜಯ ಜಯ ॥
ಶ್ರೀಮತೀ । ಜಯಭಾರತೀ ಜಯ ಜಯ ॥
ಹಿಮವಂತನೊಂದು ಕಡೆ-ಹನುಮಂತನೊಂದು ಕಡೆ ।
ಜಯದ ಗುರುತಿರಿಸಿರಲು-ಭಯವೇತಕೆಲೆ ತಾಯೆ ॥
ಜಯ ಭಾರತೀ ಜಯ ಜಯ ॥
ಜಗವೆಚ್ಚರುವ ಮುನ್ನ-ನಿಗಮ ಗೀತವ ಪಾಡಿ ।
ಅರಿವಿನೊಸಗೆಯನಿತ್ತ-ಗುರುವು ನೀನೆಲೆ ತಾಯೆ ॥
ಜಯ ಭಾರತೀ ಜಯ ಜಯ ॥
ಧರೆಯ ಜೋತಿಯ ಪರಕೆ-ಪರದ ಜೋತಿಯ ಧರೆಗೆ ।
ಬೆಳಗುವಗ್ಗಳಿಕೆ ನಿನ-ದೊಬ್ಬಳದೆ ಲೋಕದಲಿ ॥
ಜಯ ಭಾರತೀ ಜಯ ಜಯ ॥
Wednesday, 8 November 2023
ವೀರಗೀತೆ - ಕೇತಕೀವನ - ಡಿವಿಜಿ
ಎಲ್ಲಿಹರೆಮ್ಮಯ ನಾಡಿನ ಹೆಸರನು
ಕಾಯುವ ಕಲಿತನದಾಳುಗಳು
ಕರೆಸೋಕದ ಕರವಾಳುಗಳು?
ಧರುಮದ ಮುಡುಪಿನ ಬಾಳುಗಳು?
ಎಲ್ಲಿಹರೆಮ್ಮಯ ಜನನಿಯ ಪಾಡನು
ನೆನೆದಳಲುವ ಕರುಣಾಳುಗಳು?
ಬರುತಿದೆ ದೂರದ ಯುಗಗಳ ದಾಟುತ
ಹಿಮಗಿರಿ ವನಗಳ ದನಿಯೊಂದು
ಸೇತುವೆ ಚಿಮ್ಮುವ ಪನಿಯೊಂದು
ಗೀತೆಯ ಬೀರದ ಪೊನಲೊಂದು
ನೆನೆಯುತ ನಾವದ ನಲಿಯುತ
ಮಾತೆಯ ಚರಣಕೆ ಮಣಿಯುವ ಶರಣೆಂದು.
ಇಂದೀ ನಾಡೊಳು ಮೂಡುತಲಿರುವುದು
ಪೊಸ ಬೆಳಕಿನ ತಿಳಿಕಳೆಯೊಂದು
ಗೌರವಬೀಜದ ಬೆಳೆಯೊಂದು
ಪೌರುಷವೇಗದ ಹೊಳೆಯೊಂದು
ಬನ್ನಿರಿ ಸೇರುವ ಬಾಳನು ತೊಳೆಯುವ
ನಾವೆಲ್ಲರುಮದರೊಳು ಮಿಂದು.
ಬನ್ನಿರಿ ಧೀರರೆ ಬನ್ನಿರಿ ಶೂರರೆ
ತನ್ನಿರಿ ಕೆಚ್ಚಿನ ಜೀವಗಳ
ಬನ್ನಿರಿ ನೆನೆಯದೆ ನೋವುಗಳ
ಬನ್ನಿರಿ ಗಣಿಸದೆ ಸಾವುಗಳ
ಬನ್ನಿರಿ ಗೆಳೆಯರೆ ತನ್ನಿರಿ ಮಾತೆಗೆ
ಬೀರದ ಸಾಸದ ಸೇವೆಗಳ!
ಕತ್ತಿಯನರಿಯದ ನೆತ್ತರ ಸುರಿಯದ
ಸಾತ್ತ್ವಿಕ ಶೌರ್ಯದ ಕಾಳಗಕೆ
ಸತ್ಯದ ಸೇನೆಯ ಪಾಳೆಯಕೆ
ಆತುಮಬಲದೊಡ್ಡೋಲಗಕೆ
ಬನ್ನಿರಿ ಸೇರುವ ಬನ್ನವನರಿಯದ
ಧರುಮದ ದೇವತೆಯೂಳಿಗಕೆ.
ವಿನಯದ ಪಡೆ ದುರ್ವಿನಯವನೊಡೆಯಲು
ಲೋಕಕದಚ್ಚರಿಯೆನಿಸುವುದು
ನಾಕದ ಮೆಚ್ಚಿಕೆಯೆನಿಸುವುದು
ನೀತಿಯ ಪೆಚ್ಚುಗೆಯೆನಿಸುವುದು
ನಡೆಯುವ ಜಯಜಯವೆನುತಲಿ
ನಾವದು ಮಾತೆಯ ನಚ್ಚುಗೆಯೆನಿಸುವುದು.
ಬನ್ನಿರಿ ಸೇವಿಪ; ಬಂಧವ ಕಳೆಯುವ;
ತಣಿಸುವ ನಮ್ಮನು ಪೆತ್ತವಳ,
ಪರದೀಪವನಿಳೆಗಿತ್ತವಳ,
ಪರಕಿಳೆಯಾರತಿಯೆತ್ತುವಳ ಬನ್ನಿ
ಪೂಜಿಪ ಭುವನದ ಬದುಕಿಗೆ
ತನ್ನಯ ಬದುಕನು ಬಿತ್ತುವಳ!
ಕಾಯುವ ಕಲಿತನದಾಳುಗಳು
ಕರೆಸೋಕದ ಕರವಾಳುಗಳು?
ಧರುಮದ ಮುಡುಪಿನ ಬಾಳುಗಳು?
ಎಲ್ಲಿಹರೆಮ್ಮಯ ಜನನಿಯ ಪಾಡನು
ನೆನೆದಳಲುವ ಕರುಣಾಳುಗಳು?
ಬರುತಿದೆ ದೂರದ ಯುಗಗಳ ದಾಟುತ
ಹಿಮಗಿರಿ ವನಗಳ ದನಿಯೊಂದು
ಸೇತುವೆ ಚಿಮ್ಮುವ ಪನಿಯೊಂದು
ಗೀತೆಯ ಬೀರದ ಪೊನಲೊಂದು
ನೆನೆಯುತ ನಾವದ ನಲಿಯುತ
ಮಾತೆಯ ಚರಣಕೆ ಮಣಿಯುವ ಶರಣೆಂದು.
ಇಂದೀ ನಾಡೊಳು ಮೂಡುತಲಿರುವುದು
ಪೊಸ ಬೆಳಕಿನ ತಿಳಿಕಳೆಯೊಂದು
ಗೌರವಬೀಜದ ಬೆಳೆಯೊಂದು
ಪೌರುಷವೇಗದ ಹೊಳೆಯೊಂದು
ಬನ್ನಿರಿ ಸೇರುವ ಬಾಳನು ತೊಳೆಯುವ
ನಾವೆಲ್ಲರುಮದರೊಳು ಮಿಂದು.
ಬನ್ನಿರಿ ಧೀರರೆ ಬನ್ನಿರಿ ಶೂರರೆ
ತನ್ನಿರಿ ಕೆಚ್ಚಿನ ಜೀವಗಳ
ಬನ್ನಿರಿ ನೆನೆಯದೆ ನೋವುಗಳ
ಬನ್ನಿರಿ ಗಣಿಸದೆ ಸಾವುಗಳ
ಬನ್ನಿರಿ ಗೆಳೆಯರೆ ತನ್ನಿರಿ ಮಾತೆಗೆ
ಬೀರದ ಸಾಸದ ಸೇವೆಗಳ!
ಕತ್ತಿಯನರಿಯದ ನೆತ್ತರ ಸುರಿಯದ
ಸಾತ್ತ್ವಿಕ ಶೌರ್ಯದ ಕಾಳಗಕೆ
ಸತ್ಯದ ಸೇನೆಯ ಪಾಳೆಯಕೆ
ಆತುಮಬಲದೊಡ್ಡೋಲಗಕೆ
ಬನ್ನಿರಿ ಸೇರುವ ಬನ್ನವನರಿಯದ
ಧರುಮದ ದೇವತೆಯೂಳಿಗಕೆ.
ವಿನಯದ ಪಡೆ ದುರ್ವಿನಯವನೊಡೆಯಲು
ಲೋಕಕದಚ್ಚರಿಯೆನಿಸುವುದು
ನಾಕದ ಮೆಚ್ಚಿಕೆಯೆನಿಸುವುದು
ನೀತಿಯ ಪೆಚ್ಚುಗೆಯೆನಿಸುವುದು
ನಡೆಯುವ ಜಯಜಯವೆನುತಲಿ
ನಾವದು ಮಾತೆಯ ನಚ್ಚುಗೆಯೆನಿಸುವುದು.
ಬನ್ನಿರಿ ಸೇವಿಪ; ಬಂಧವ ಕಳೆಯುವ;
ತಣಿಸುವ ನಮ್ಮನು ಪೆತ್ತವಳ,
ಪರದೀಪವನಿಳೆಗಿತ್ತವಳ,
ಪರಕಿಳೆಯಾರತಿಯೆತ್ತುವಳ ಬನ್ನಿ
ಪೂಜಿಪ ಭುವನದ ಬದುಕಿಗೆ
ತನ್ನಯ ಬದುಕನು ಬಿತ್ತುವಳ!
ನಾರದ - ಕೇತಕೀವನ - ಡಿವಿಜಿ
ಭುವನ ಮರುಸಿಕತದೊಳು ಮಾ- ।
ನವಹೃದಯದ್ರವ ತರಂಗಿಣಿಯ ನಿರವಿಸುವಾ ॥
ಕವಿ ಗಾಯಕ ನರ್ತಕ ಪುಂ- ।
ಗವ ನಾರದನೋವುಗೆಮ್ಮ ಜೀವನವನಮಂ ॥
ನವಹೃದಯದ್ರವ ತರಂಗಿಣಿಯ ನಿರವಿಸುವಾ ॥
ಕವಿ ಗಾಯಕ ನರ್ತಕ ಪುಂ- ।
ಗವ ನಾರದನೋವುಗೆಮ್ಮ ಜೀವನವನಮಂ ॥
Tuesday, 7 November 2023
ನವನಿಧಿ - ಕೇತಕೀವನ - ಡಿವಿಜಿ
ಎನ್ನವಳು ನೀನೆಂಬ ಭರವಸೆಯನೆಂದೆನಗೆ
ಮನ್ಮನೋಹಾರಿ ಕೊಡುವೆ?
ಸಂದೇಹದಿಂದಂತರಪಿಶಾಚಿಯಾದೆನ್ನ-
ನೆಂದು ನೀಂ ಪಾರುಗೆಯ್ವೆ?
ಬರಿ ನಗುವಿನಿಂದೇನು? ನೆರೆನೋಟದಿಂದೇನು?
ಬೆರಗಾಗೆನದಕೆ ನಾನು.
ಇಂಬು ಮುಖವಾಡಗಳ ತುಂಬಿದೊಯ್ಯಾರಗಳ
ನಂಬಿ ಕೆಟ್ಟವನು ನಾನು.
ನಿನ್ನೊಂದು ನುಡಿಯಿಂದಲೆನಗೆ ಬಿಡುಗಡೆ,
ಗೆಲವು. ಎನ್ನು ನೀನ್ “ಒಲಿದೆನ್" ಎಂದು.
“ನಿನ್ನವಳು ನಾನ್" ಎನ್ನು; ಅದುವೆ ನವನಿಧಿಯೆನಗೆ,
ಜನ್ಮಕದೆ ಬೇಳ್ಪ ಫಲವು.
To receive the posts on your personal email, pls subscribe to https://groups.google.com/g/todayskagga
Monday, 6 November 2023
ನೆಲದಾವರೆ - ಕೇತಕೀವನ - ಡಿವಿಜಿ
(೧) ಎಳೆಬೆಳಕಿನಲಿ
ಕಳಕಳಿಸುತಲಿ
ಹಳದಿಯ ಸಗ್ಗಿ
ನೆರೆದಿದೆ ಹಿಗ್ಗಿ.
ಎಲೆಯೊಂದಿಲ್ಲ;
ಸೆಲೆಯಿನಿತಿಲ್ಲ;
ಬೆಳಸಿನ ಮುಗಿತ,
ಬದುಕಿನ ನೆಗೆತ.
(೨) ತಿರೆಯ ಕರಿಮೈಯಾಗಿ,
(೨) ತಿರೆಯ ಕರಿಮೈಯಾಗಿ,
ಮೈಯೆಲ್ಲ ಹೂವಾಗಿ,
ಹೂವೆಲ್ಲ ಹೊನ್ನಾಗಿ,
ನಿಂದಿಹುದು ಮರವು;
ಮರವಲ್ಲ ಸಿರಿಯು
-ಧರಣಿಯೈಸಿರಿಯು,
(೩) ಅರೆದಿನದ ಸೊಗಕೆಂದು
ವರುಷವೆಲ್ಲವು ನಿಂದು
ಕೊರೆವ ಚಳಿಯಲಿ ನೊಂದು
ಉರಿವ ಬಿಸಿಲಲಿ ಬೆಂದು
ನೋಂತಳಿವಳು.
ಅರಿಶಿನದ ವಸನದಲಿ
ಗರಿಕೆ ಹಸೆಹಸುರಿನಲಿ
ಸಂತಸಿಪಳು.
(೪) ತೊರೆದೆಲೆಯ
ಹೊರೆಹೊರೆಯ
ಮರಲ ಮುಡಿದಿಹಳು
ಏನಿವಳ ನಗುವು ।
ಏನಿವಳ ನಗುವು ।
ಕಳೆದು ಹೂಮೆದೆಯ
ತಿಳಿಹೊನ್ನ ಹೊದೆಯ
ಒಳ್ಳಿದರ ನಲುವು
ಮಸಿಯೊಡಲು
ಮಿಸುನಿ ನಗು
ಪಳ್ಳಿವೆಣ್ ಚೆಲುವು ।
(೫) ಬದುಕಿಗಿದು ತುಂಬು
ಪೊಡವಿಗೊಂದಿಂಬು
ಮೊಗದ ಮಸಕಿನಲಿ
ನಗೆಯ ಬೆಳಕಿರಲಿ
ಅಲರಿಂದೆ ತರುತೆ
ಒಲವಿಂದೆ ನರತೆ.
Sunday, 5 November 2023
ಭುವಿ-ದಿವ - ಕೇತಕೀವನ - ಡಿವಿಜಿ
ಏಂ ಮರೆವೊ ಹುವಿಗೆ ದಿವವಿನಿ- ।
ಸಿಂಮಿದನವೊಲೆವೆಯ ಮಿಸುಕಲವನಿಂ ತನಗಾ- ॥ದುಮ್ಮಳವ ಮರೆತು ಪಸಿರುಡೆ- ।
ಯಿಂ ಮೆಯ್ಸೊಬಗಾಂತು ಮದುವೆಯಣುಗಿವೊಲೆಸೆವಳ್ ॥
ಏಂ ನೆನಪೊ ದಿವಕೆ ಭುವಿಯಿಂ ।
ಮನ್ನಣೆಯಂ ಕೊಂಡುಮವಳನಣಕಿಪ ಚಲದಿಂ ॥
ಮುನ್ನಿನ ಗಣಿತವನೆಣಿಸುತೆ ।
ತಿನ್ನಿಪನವಳಣುಗರಿಂಗೆ ಪಳಸುಣಿಸುಗಳಂ ॥
ಓ ಬಾಳೆ, ದಿವಕೆ ಮಣಿದೆ- ।
ನಾ ಬೆದರಿಪ ದೇವರೆಂಬ ಋಣಗಣಕರಿನೇಂ ॥
ಆ ಬಿದಿಯ ಚಲವನೆದುರಿಸ- ।
ಲೀ ಭುವಿ ತಾಯ್ಮಡಿಲನೊಲುಮೆ ತುಂಬಿರೆ ಸಾಲ್ಗುಂ ॥
Subscribe to:
Posts (Atom)