ಭುವನ ಮರುಸಿಕತದೊಳು ಮಾ- ।
ನವಹೃದಯದ್ರವ ತರಂಗಿಣಿಯ ನಿರವಿಸುವಾ ॥
ಕವಿ ಗಾಯಕ ನರ್ತಕ ಪುಂ- ।
ಗವ ನಾರದನೋವುಗೆಮ್ಮ ಜೀವನವನಮಂ ॥
Devanahalli Venkataramanaiah Gundappa, popularly known as DVG, was a Kannada writer and philosopher. He is best known for Manku Thimmana Kagga
Wednesday, 8 November 2023
Tuesday, 7 November 2023
ನವನಿಧಿ - ಕೇತಕೀವನ - ಡಿವಿಜಿ
ಎನ್ನವಳು ನೀನೆಂಬ ಭರವಸೆಯನೆಂದೆನಗೆ
ಮನ್ಮನೋಹಾರಿ ಕೊಡುವೆ?
ಸಂದೇಹದಿಂದಂತರಪಿಶಾಚಿಯಾದೆನ್ನ-
ನೆಂದು ನೀಂ ಪಾರುಗೆಯ್ವೆ?
ಬರಿ ನಗುವಿನಿಂದೇನು? ನೆರೆನೋಟದಿಂದೇನು?
ಬೆರಗಾಗೆನದಕೆ ನಾನು.
ಇಂಬು ಮುಖವಾಡಗಳ ತುಂಬಿದೊಯ್ಯಾರಗಳ
ನಂಬಿ ಕೆಟ್ಟವನು ನಾನು.
ನಿನ್ನೊಂದು ನುಡಿಯಿಂದಲೆನಗೆ ಬಿಡುಗಡೆ,
ಗೆಲವು. ಎನ್ನು ನೀನ್ “ಒಲಿದೆನ್" ಎಂದು.
“ನಿನ್ನವಳು ನಾನ್" ಎನ್ನು; ಅದುವೆ ನವನಿಧಿಯೆನಗೆ,
ಜನ್ಮಕದೆ ಬೇಳ್ಪ ಫಲವು.
To receive the posts on your personal email, pls subscribe to https://groups.google.com/g/todayskagga
Monday, 6 November 2023
ನೆಲದಾವರೆ - ಕೇತಕೀವನ - ಡಿವಿಜಿ
(೧) ಎಳೆಬೆಳಕಿನಲಿ
ಕಳಕಳಿಸುತಲಿ
ಹಳದಿಯ ಸಗ್ಗಿ
ನೆರೆದಿದೆ ಹಿಗ್ಗಿ.
ಎಲೆಯೊಂದಿಲ್ಲ;
ಸೆಲೆಯಿನಿತಿಲ್ಲ;
ಬೆಳಸಿನ ಮುಗಿತ,
ಬದುಕಿನ ನೆಗೆತ.
(೨) ತಿರೆಯ ಕರಿಮೈಯಾಗಿ,
(೨) ತಿರೆಯ ಕರಿಮೈಯಾಗಿ,
ಮೈಯೆಲ್ಲ ಹೂವಾಗಿ,
ಹೂವೆಲ್ಲ ಹೊನ್ನಾಗಿ,
ನಿಂದಿಹುದು ಮರವು;
ಮರವಲ್ಲ ಸಿರಿಯು
-ಧರಣಿಯೈಸಿರಿಯು,
(೩) ಅರೆದಿನದ ಸೊಗಕೆಂದು
ವರುಷವೆಲ್ಲವು ನಿಂದು
ಕೊರೆವ ಚಳಿಯಲಿ ನೊಂದು
ಉರಿವ ಬಿಸಿಲಲಿ ಬೆಂದು
ನೋಂತಳಿವಳು.
ಅರಿಶಿನದ ವಸನದಲಿ
ಗರಿಕೆ ಹಸೆಹಸುರಿನಲಿ
ಸಂತಸಿಪಳು.
(೪) ತೊರೆದೆಲೆಯ
ಹೊರೆಹೊರೆಯ
ಮರಲ ಮುಡಿದಿಹಳು
ಏನಿವಳ ನಗುವು ।
ಏನಿವಳ ನಗುವು ।
ಕಳೆದು ಹೂಮೆದೆಯ
ತಿಳಿಹೊನ್ನ ಹೊದೆಯ
ಒಳ್ಳಿದರ ನಲುವು
ಮಸಿಯೊಡಲು
ಮಿಸುನಿ ನಗು
ಪಳ್ಳಿವೆಣ್ ಚೆಲುವು ।
(೫) ಬದುಕಿಗಿದು ತುಂಬು
ಪೊಡವಿಗೊಂದಿಂಬು
ಮೊಗದ ಮಸಕಿನಲಿ
ನಗೆಯ ಬೆಳಕಿರಲಿ
ಅಲರಿಂದೆ ತರುತೆ
ಒಲವಿಂದೆ ನರತೆ.
Sunday, 5 November 2023
ಭುವಿ-ದಿವ - ಕೇತಕೀವನ - ಡಿವಿಜಿ
ಏಂ ಮರೆವೊ ಹುವಿಗೆ ದಿವವಿನಿ- ।
ಸಿಂಮಿದನವೊಲೆವೆಯ ಮಿಸುಕಲವನಿಂ ತನಗಾ- ॥ದುಮ್ಮಳವ ಮರೆತು ಪಸಿರುಡೆ- ।
ಯಿಂ ಮೆಯ್ಸೊಬಗಾಂತು ಮದುವೆಯಣುಗಿವೊಲೆಸೆವಳ್ ॥
ಏಂ ನೆನಪೊ ದಿವಕೆ ಭುವಿಯಿಂ ।
ಮನ್ನಣೆಯಂ ಕೊಂಡುಮವಳನಣಕಿಪ ಚಲದಿಂ ॥
ಮುನ್ನಿನ ಗಣಿತವನೆಣಿಸುತೆ ।
ತಿನ್ನಿಪನವಳಣುಗರಿಂಗೆ ಪಳಸುಣಿಸುಗಳಂ ॥
ಓ ಬಾಳೆ, ದಿವಕೆ ಮಣಿದೆ- ।
ನಾ ಬೆದರಿಪ ದೇವರೆಂಬ ಋಣಗಣಕರಿನೇಂ ॥
ಆ ಬಿದಿಯ ಚಲವನೆದುರಿಸ- ।
ಲೀ ಭುವಿ ತಾಯ್ಮಡಿಲನೊಲುಮೆ ತುಂಬಿರೆ ಸಾಲ್ಗುಂ ॥
Friday, 3 November 2023
ಕಲ್ಯಾಣಮುನಿಯ ಪಶ್ಚಾತ್ತಾಪ - ಕೇತಕೀವನ - ಡಿವಿಜಿ
ಪುಣ್ಯದೇಶವ ತೊರೆದು ಧನ್ಯಚರಿತೆಯ ಮರೆತು
ದೂರ ಬಂದೆ
ದೂರ ಬಂದೆ
ವೇದಬಾಹಿರನಾಗಿ ಸಾಧುವರ್ಜಿತನಾಗಿ
ಜಾರಿ ನಿಂದೆ
ಸ್ವಜನದೆಡೆ ಸೊಗಮೆಂದು ನಿಜಧರುಮ ಲೇಸೆಂದು
ಗೆಳೆಯರೆಲ್ಲರ್
ಯವನನೃಪನೇಕೆಂದು ಅವನೊಲಿವದೇಕೆಂದು
ಪಳಿದು ನಿಂತರ್
ಶ್ರುತಿಮತವ ಪರಪಿ ಸಂಸ್ಕೃತಕಲೆಯ ಕಲಿಸಿ ನಾಂ
ತಿಳಿವಿನಿಂದೆ
ಎನ್ನ ನಾಡನು ರಣದಿ ಬನ್ನವಡಿಸಿದ ಜನರ
ಗೆಲುವೆನೆಂದೆ
ವ್ರತವನದ ಸಾಧಿಸಲು ಹಿತಗತಿಯ ಬೋಧಿಸಲು
ಇತ್ತ ಸಾರ್ದೆ
ಸಾಧಿಪ್ಪುದರಿದಾಗೆ ಮೂದಲಿಕೆಗೀಡಾಗಿ
ಸತ್ತು ಬಾಳ್ದೆ
ಕಾಕಕಂಠವ ತಿರ್ದೆ ಕೋಕಿಲೆಯು ಸಾರಿ ತಾಂ
ಕುಂದುವಂತೆ
ಸ್ವಜನಧರ್ಮವ ವಿಜನಕರುಹೆ ಸಾಹಸಗೈದು
ನೊಂದು ನಿಂತೆ
ಜಾತಿಕರುಮವ ಪರಿದು ಪೂತಮಾರ್ಗಿದಿನಲೆದು
ಮರುಳನಾದೆ
ಅನ್ಯಜನದಲಿ ಬೆರೆತು ಶೂನ್ಯಪಥವನು ಹಿಡಿದು
ದುರುಳನಾದೆ
ಯೋಗವಿಧಿಗಳ ತೊರೆದೆ ಯಾಗ ಸವಗಳ ತೊರೆದೆ
ತಪವ ತೊರೆದೆ
ಯಾಜನಂಗಳ ತೊರೆದೆ ಪೂಜೆ ವ್ರತಗಳ ತೊರೆದೆ
ಜಪವ ತೊರೆದೆ
ಗತಿ ಯಾವುದಿನ್ನೆನಗೆ ಹುತವಹನೆ ಕರುಣೆಯಿಡು
ಅನಲ ನೀನು
ಉರಿಯ ಕರಗಳಿನೆನ್ನ ದುರಿತ ತತಿಯನು ನೀಗಿ
ತನುವ ತಡಹು
ಪೂತನಾಗಿಸು ಭರತ ಭೂತಲದೊಳೇ ಮಗುಳೆ
ಜನುಮ ನೀಡು
ಆರ್ಯದೇಶದಿ ವಿಪ್ರಚರ್ಯೆಯೊಳೆ ನೀನೆನ್ನ
ಮನವ ಮಾಡು
ವಾಯುದೇವನೆ, ಎನ್ನ ಕಾಯಭಸ್ಮವ ಕೊಂಡು
ಕರುಣೆಯಿಂದೆ
ಭುವನ ಪಾವನೆಯೆನಿಪ ದಿವಿಜಗಂಗೆಯೊಲಿರಿಸು
ತ್ವರಿತದಿಂದೆ
ಯಾಗದೇವನೆ, ಎನ್ನ ಬೇಗದಿಂ ಬಿಡಿಪುದೀ-
ಯೊಡಲ ಸೆರೆಯಿಂ
ಪಾಳು ಬಡಿದಿರ್ಪ ಈ ಬಾಳ ನೀಂ ಕೈಪಿಡಿದು
ನಡಸು ದಯೆಯಿಂ.
ಜಾರಿ ನಿಂದೆ
ಸ್ವಜನದೆಡೆ ಸೊಗಮೆಂದು ನಿಜಧರುಮ ಲೇಸೆಂದು
ಗೆಳೆಯರೆಲ್ಲರ್
ಯವನನೃಪನೇಕೆಂದು ಅವನೊಲಿವದೇಕೆಂದು
ಪಳಿದು ನಿಂತರ್
ಶ್ರುತಿಮತವ ಪರಪಿ ಸಂಸ್ಕೃತಕಲೆಯ ಕಲಿಸಿ ನಾಂ
ತಿಳಿವಿನಿಂದೆ
ಎನ್ನ ನಾಡನು ರಣದಿ ಬನ್ನವಡಿಸಿದ ಜನರ
ಗೆಲುವೆನೆಂದೆ
ವ್ರತವನದ ಸಾಧಿಸಲು ಹಿತಗತಿಯ ಬೋಧಿಸಲು
ಇತ್ತ ಸಾರ್ದೆ
ಸಾಧಿಪ್ಪುದರಿದಾಗೆ ಮೂದಲಿಕೆಗೀಡಾಗಿ
ಸತ್ತು ಬಾಳ್ದೆ
ಕಾಕಕಂಠವ ತಿರ್ದೆ ಕೋಕಿಲೆಯು ಸಾರಿ ತಾಂ
ಕುಂದುವಂತೆ
ಸ್ವಜನಧರ್ಮವ ವಿಜನಕರುಹೆ ಸಾಹಸಗೈದು
ನೊಂದು ನಿಂತೆ
ಜಾತಿಕರುಮವ ಪರಿದು ಪೂತಮಾರ್ಗಿದಿನಲೆದು
ಮರುಳನಾದೆ
ಅನ್ಯಜನದಲಿ ಬೆರೆತು ಶೂನ್ಯಪಥವನು ಹಿಡಿದು
ದುರುಳನಾದೆ
ಯೋಗವಿಧಿಗಳ ತೊರೆದೆ ಯಾಗ ಸವಗಳ ತೊರೆದೆ
ತಪವ ತೊರೆದೆ
ಯಾಜನಂಗಳ ತೊರೆದೆ ಪೂಜೆ ವ್ರತಗಳ ತೊರೆದೆ
ಜಪವ ತೊರೆದೆ
ಗತಿ ಯಾವುದಿನ್ನೆನಗೆ ಹುತವಹನೆ ಕರುಣೆಯಿಡು
ಅನಲ ನೀನು
ಉರಿಯ ಕರಗಳಿನೆನ್ನ ದುರಿತ ತತಿಯನು ನೀಗಿ
ತನುವ ತಡಹು
ಪೂತನಾಗಿಸು ಭರತ ಭೂತಲದೊಳೇ ಮಗುಳೆ
ಜನುಮ ನೀಡು
ಆರ್ಯದೇಶದಿ ವಿಪ್ರಚರ್ಯೆಯೊಳೆ ನೀನೆನ್ನ
ಮನವ ಮಾಡು
ವಾಯುದೇವನೆ, ಎನ್ನ ಕಾಯಭಸ್ಮವ ಕೊಂಡು
ಕರುಣೆಯಿಂದೆ
ಭುವನ ಪಾವನೆಯೆನಿಪ ದಿವಿಜಗಂಗೆಯೊಲಿರಿಸು
ತ್ವರಿತದಿಂದೆ
ಯಾಗದೇವನೆ, ಎನ್ನ ಬೇಗದಿಂ ಬಿಡಿಪುದೀ-
ಯೊಡಲ ಸೆರೆಯಿಂ
ಪಾಳು ಬಡಿದಿರ್ಪ ಈ ಬಾಳ ನೀಂ ಕೈಪಿಡಿದು
ನಡಸು ದಯೆಯಿಂ.
To receive the posts on your personal email, pls subscribe to https://groups.google.com/g/todayskagga
Thursday, 2 November 2023
ಒಬ್ಬ ತರುಣ ಕವಿಗೆ - ಕೇತಕೀವನ - ಡಿವಿಜಿ
(ಆತನ ಮದುವೆಯ ಸಂದರ್ಭದಲ್ಲಿ)
ಸಿರಿವಂತ ತರುಣ ಕವಿ ಮದುವಣಿಗ ಕೇಳಿದನು,
ಸಿರಿಸೊಂಪದೊಂದುಮಿಲ್ಲದ ಗುಂಡು ರಗಳೆಯನು-
ಗೆಳೆಯ, ನೀಂ ಸ್ವೀಕರಿಪುದೆನ್ನ ಅಭಿನಂದನೆಯ
ನಿನ್ನಯಾಹ್ವಾನವೆನ್ನಯ ಹಸ್ತಚಿತ್ತಗಳ
ಮುಟ್ಟಿಹುದು; ಸಂತಸಂಬಟ್ಟು ನಾಂ ವಂದಿಪೆನು.
ಪರಿಶೆಯ ವಿಶೇಷ ಸಾಹಿತ್ಯೋತ್ಸವದ ದುಡಿತ-
ವೆನಗೆ ತಪ್ಪಿಸಿತು (ನೀನೇ ಶಂಕೆಪಟ್ಟಂತೆ)
ನಿನ್ನಯ ವಿಶೇಷ ಸಾಹಿತ್ಯೋತ್ಸವದ ಸೊಗವ.
ಕೆಳೆನುಡಿಯ ಬರೆಯಲುಂ ಬಿಡುವಿಲ್ಲದಾಯ್ತಾಗ.
ನೀನೀಗಳಾನುಮೀ ಹರಕೆಯನು ಕೊಳ್ಳುವೆಯ?
ಪೊಸಬಳ್ಳಿಯೊಂದೀಗ ನಿನ್ನಿರವನಪ್ಪಿಹುದು,
ಅದರ ತಳಿರಲರುಗಳ ಸವಿ ಬೆಡಗು ಬಣ್ಣಗಳು
ನಿನ್ನ ತಿಳಿಗಣ್ಣನಿನ್ನಷ್ಟಗಲವರಳಿಸಲಿ.
ಅದರ ಮೆಲ್ಲುಲಿಯ ನಸುನಗೆಯ ಸೆಲೆಸೊಲ್ಲುಗಳು
ನಿನ್ನ ಕಿವಿಗಿನ್ನಷ್ಟು ಸೂಕ್ಷ್ಮತೆಯ ತಂದಿಡಲಿ.
ಅಂತು ನೀಂ ಜಗದ ಬದುಕಿನ ಮಹಿಮೆ ಮರ್ಮಗಳ
ಕಾಣುತ್ತೆ ಕೇಳುತ್ತೆ ಪೇಳುತ್ತಲಿಹುದೆಮಗೆ
ಆಲಿಸುತೆ ಬಾಳೊಳ್ಳಿತೆನುತೆ ನಾಂ ನಲಿಯುವೆವು.
ನಿನ್ನ ಕೊಳಲೊಡನೆ ಕೊರಲಿನ್ನೊಂದು ಸೇರಿಹುದು
ಅಂತಿನ್ನು ಹೊಸ ರಾಗದಿಂಬೊಂದು ಹೊಮ್ಮುವುದು
ಅದು ನಮ್ಮ ಕನ್ನಡದ ಬಾಳನ್ನು ತಣಿಸುವುದು.
ಸಿರಿವಂತ ತರುಣ ಕವಿ ಮದುವಣಿಗ ಕೇಳಿದನು,
ಸಿರಿಸೊಂಪದೊಂದುಮಿಲ್ಲದ ಗುಂಡು ರಗಳೆಯನು-
ಗೆಳೆಯ, ನೀಂ ಸ್ವೀಕರಿಪುದೆನ್ನ ಅಭಿನಂದನೆಯ
ನಿನ್ನಯಾಹ್ವಾನವೆನ್ನಯ ಹಸ್ತಚಿತ್ತಗಳ
ಮುಟ್ಟಿಹುದು; ಸಂತಸಂಬಟ್ಟು ನಾಂ ವಂದಿಪೆನು.
ಪರಿಶೆಯ ವಿಶೇಷ ಸಾಹಿತ್ಯೋತ್ಸವದ ದುಡಿತ-
ವೆನಗೆ ತಪ್ಪಿಸಿತು (ನೀನೇ ಶಂಕೆಪಟ್ಟಂತೆ)
ನಿನ್ನಯ ವಿಶೇಷ ಸಾಹಿತ್ಯೋತ್ಸವದ ಸೊಗವ.
ಕೆಳೆನುಡಿಯ ಬರೆಯಲುಂ ಬಿಡುವಿಲ್ಲದಾಯ್ತಾಗ.
ನೀನೀಗಳಾನುಮೀ ಹರಕೆಯನು ಕೊಳ್ಳುವೆಯ?
ಪೊಸಬಳ್ಳಿಯೊಂದೀಗ ನಿನ್ನಿರವನಪ್ಪಿಹುದು,
ಅದರ ತಳಿರಲರುಗಳ ಸವಿ ಬೆಡಗು ಬಣ್ಣಗಳು
ನಿನ್ನ ತಿಳಿಗಣ್ಣನಿನ್ನಷ್ಟಗಲವರಳಿಸಲಿ.
ಅದರ ಮೆಲ್ಲುಲಿಯ ನಸುನಗೆಯ ಸೆಲೆಸೊಲ್ಲುಗಳು
ನಿನ್ನ ಕಿವಿಗಿನ್ನಷ್ಟು ಸೂಕ್ಷ್ಮತೆಯ ತಂದಿಡಲಿ.
ಅಂತು ನೀಂ ಜಗದ ಬದುಕಿನ ಮಹಿಮೆ ಮರ್ಮಗಳ
ಕಾಣುತ್ತೆ ಕೇಳುತ್ತೆ ಪೇಳುತ್ತಲಿಹುದೆಮಗೆ
ಆಲಿಸುತೆ ಬಾಳೊಳ್ಳಿತೆನುತೆ ನಾಂ ನಲಿಯುವೆವು.
ನಿನ್ನ ಕೊಳಲೊಡನೆ ಕೊರಲಿನ್ನೊಂದು ಸೇರಿಹುದು
ಅಂತಿನ್ನು ಹೊಸ ರಾಗದಿಂಬೊಂದು ಹೊಮ್ಮುವುದು
ಅದು ನಮ್ಮ ಕನ್ನಡದ ಬಾಳನ್ನು ತಣಿಸುವುದು.
Wednesday, 1 November 2023
ಪೌರವ - ಕೇತಕೀವನ - ಡಿವಿಜಿ
ಮಾಹುತ- ದೊರೆಯೆ ನೋಡುವುದಿತ್ತ ತಕ್ಷಶಿಲೆಯರಸು ಬರುತಿಹರು ಭರದಿಂದಲೋಡಿ ಬರುತಿಹನು.
ಪೌರವ- ಯವನರೂಳಿಗದವನೆ? ತನ್ನವರ ಹಗೆಯೆ?
ಮಾಹುತ- ಬವರದೀ ನಡುವಿನಲಿ ಬಹನೇಕೊ, ತಿಳಿಯೆಂ.
ಪೌರವ- ಬರಲಿ; ಹೇಡಿಗೆ ಸಲುವ ಮನ್ನಣೆಯ ಪಡೆದು ಮರುಗಲಿನಿಸಾದೊಡಂ ತನ್ನ ದುಷ್ಕೃತಿಗೆ.
[ತಕ್ಷಶಿಲೆಯರಸನಾದ ಶಾಂಬರಿಯು ಪ್ರವೇಶಿಸುವನು]
ಶಾಂಬರಿ- ಭಳಿರೆ! ಮೆಚ್ಚಿದೆ ಸಖನೆ ನಿನ್ನ ಸಾಹಸವ. ನಿಲಿಸಿನ್ನು ರಣವ; ಬಲವಂತರೊಳ್ ಹಟವೆ?
ಪೌರವ- ತೊಲಗೆಲವೊ ಶಾಂಬರಿಯೆ; ಸಖನಾರು ನಿನಗೆ? ಕುಲವಂಚಕನ ಕೂಡೆ ಸಖ್ಯವೇನೆನಗೆ?
ಶಾಂಬರಿ- ಸೈರಿಸೆಲೆ ಪೌರವೇಂದ್ರನೆ; ನೀಗು ಚಲವ.
ಸಾರಿರುವೆ ಶೂರತನದೆಲ್ಲೆಗದು ಬರಿದೆ.
ಪ್ರತಿಕೂಲನಿರೆ ಕಾಲನವನನೆದುರಿಸುವಚ
ತುರೆಯ ಫಲವೇನು? ಕಷ್ಟವದು ಬಗೆಯೆ.
ತೊರೆಯಿನ್ನು ಸಾಹಸವ; ಬಿಡು ನಿನ್ನ ಹಟವ
ಅರಿಬಲವ ಮರೆತು ನೀನೆನಿತು ಹೋರಿದಡೇಂ?
ಪೌರವ- ತೆರಳು, ತೆರಳೆಲೆ ನೀಚ, ನಿನ್ನೊಡನೆ ನುಡಿಯೇಂ?
ಗರುವ ಬಿಟ್ಟಿಹ ನಿನ್ನ ಬದುಕೊಂದು ಬದುಕೇಂ?
ಕರೆದು ಯವನನ ನಿನ್ನ ಮನೆಗೆ ಬಾರೆಂದು
ತೆರೆದು ಬಾಗಿಲನವನ ಕರೆದಿತ್ತ ತಂದು
ಸೈರಣೆಯ ಬೋಧಿಪೆಯ-ವಂಶಘಾತಕನೆ?
ಸಾರು ಯವನನ ಬಳಿಗೆ, ಸೇರವನ ಪದವಂ.
ಶಾಂಬರಿ- ಲಾಲಿಸೆಲೆ ಧೀರ ನೀಂಮೇಲುಮೆಯ
ಮಾತ-ಸೋಲುಗೆಲುವುಗಳೆಮ್ಮ ಕೈಯೊಳಿಹುವಲ್ಲ;
ಮೆಚ್ಚಿಹನು ಯವನಪತಿ ನಿನ್ನ ಸಾಹಸವ,
ನಚ್ಚಿ ನೀನವನೊಡನೆ ಸಂಧಿಯನು ಬೇಡು;
ನೀಡುವನು ಮನ್ನಣೆಯ; ನೀಡುವನು ಹಿತವ;
ಮಾಡಿಪೆನು ಸಖ್ಯವನು; ಬಿಡು ನಿನ್ನ ಚಲವ.
ಪೌರವ- ಎಲವೆಲವೊ! ಸಾಕು ನಾಣ್ಚಿಲ್ಲದೀ ಜಾಣ್ಮೆ
ಕುಲಗೇಡಿಗಾವ ಹಟ? ನರಿಗಾವ ನಿಯಮ?
ನಾಡಳಿದು ನಾಡಾಣ್ಮನುಳಿದೊಡೇಂ ಸೊಗಮೋ?
ಬೇಡಿ ರಿಪುಭಿಕ್ಷದಿಂ ಬಾಳ್ದೊಡೇಂ ಜಸಮೋ!
ಹರಿಚಿತ್ತದಂತಕ್ಕೆ! ಪುರುಕುಲದ ರಾಜಂಶಿರವ
ಬಾಗಿದನೆಂಬ ಸೊಲ್ಲಿಲ್ಲದಿರ್ಕೆ.
ಲೇಸ ನೀನೆಳಸುವೊಡೆ ಸಾಕು ಪೋಗಿನ್ನು,
ಸೈಸಲಾರೆನು ಧೂರ್ತದರ್ಶನವನಿನ್ನು,
ಸಾರು ಯವನನ ಬಳಿಗೆ; ಸೇರವನ ಮರೆಯಂ
ತೋರದಿರು ವಂಶವಂಚನೆಯನಿನ್ನಾನುಂ.
[ಮಾಹುತನ ಕಡೆ ತಿರುಗಿ-]
ನಡೆ ಮುಂದೆ, ಮಾಹುತನೆ; ಬಿಡು ಕರಿಯ ಭರದಿ.
ಶಾಂಬರಿ- ಸುಡುವೆನೀ ಗರ್ವವನು; ನೋಡೆನ್ನ ಬಿರುಬ.
[ಹೋಗುವನು]
ಮಾಹುತ- ಅತ್ತ ಬರುತಿದೆ ದೇವ ಪಿರಿಯದೊಂದು ಪಡೆ
ಮುತ್ತುತಿಹುವಾಗಸವ ಕರಿಯ ಮೋಡಗಳು
ವಿಷಮ ವೇಳೆಯೊಳೀಗ ಮಾಳ್ಪುದೇಂ, ದೊರೆಯೆ?
ಪೌರವ- ಅಸುವನರ್ಪಿಸುವಂಗೆ ವಿಷಮವೇಂ, ಸಮವೇಂ?
ತ್ವರಿತದಿಂ ನಡಸು ಹಸ್ತಿಯನತ್ತ ನಿಂತು
ಧುರದ ಮಧ್ಯದಿ ಹೋರಿ ಹರಣಗಳ ಕುಡುವಾ.
[ಸಿಡಿಲು ಮಿಂಚುಗಳ ಹೊಡೆತ]
(೨)
ಅಲೆಗ್ಸಾಂಡರ್- ವೀರ ನೀನೆಲೆ ಸಖನೆ, ಪೌರವೇಶ್ವರನೆ
ತೋರಿದೈ ಸಾಹಸವ, ಕಡುಪರಾಕ್ರಮವ,
ಈ ನಾಡೊಳಿಹರು ನಿನ್ನಂದದವರೆಂದು
ನಾನರಿಯದಾದೆನಾ ಶಾಂಬರಿಯ ನಚ್ಚಿ.
ಪೌರವ- ಆ ಮಾತದಂತಿರಲಿ, ಯವನಪತಿ ನಿನ್ನ
ಸಮರನೀತಿಯಿದೇನು? ನಿನ್ನ ಭಟರೆನ್ನ
ಗಾಯವಡಿಸೆವೆನುತ್ತಲಾಯುಧವ ಬಿಸುಟು,
ಆಯದಿಂ ಪಿಡಿದಿಲ್ಲಿಗೇಕೆ ತಂದಿಹರು?
ಬಾ, ಬಲದ ಕುರುಹಿರ್ದೊಡದನೆನಗೆ ತೋರು
ಈ ಭುಜದ ಸೋಜಿಗವನಿನಿಸು ನೀಂ ನೋಡು
ಧೀರತನವಲ್ತಿಂತು ಸೆರೆವಿಡಿವುದೆನ್ನ
ಹೋರಿ ಜೀವಕೆ ಜೀವವೀವೆನೈ ಮುನ್ನ.
ಅಲೆಗ್ಸಾಂಡರ್- ಎಳಸೆ ನಾಂ ನಿನ್ನಳಿವ; ಪೌರವನೆ ನಿನ್ನ
ಗೆಳೆತನವೆ ಬೇಕೆನಗೆ; ನಾನದರಿನಿವರ
ನಿಯಮಿಸಿದೆ ನಿನ್ನನೈತರಿಪುದೆಂದಿತ್ತ
ಬಯಕೆಯನು ಸಲಿಸುವೆನು; ಬೇಳ್ಬುದೇಂ ಬೆಸಸು.
ಪೌರವ- ಬೇಡುವನು ನಾನಲ್ಲ; ಬೇಳ್ಬುದೇನೆನಗೆ?
ನೀಡುವನು ನೀನಲ್ಲ; ಬೇರೆಯಿರುವನವನ್.
ನ್ಯಾಯದಿಂ ನಡೆವೊಡೆಲೆ ಯವನಪತಿ ಕೇಳು
ರಾಯನಂ ರಾಯನಿದಿರ್ಗೊಳುವಂತೆ ಕಾಣು.
ಅಲೆಗ್ಸಾಂಡರ್- ಧೀರ ನೀನೆಲೆ ಸಖನೆ, ನೀನೆ ಗಂಡುಗಲಿ.
ಬಾರೆಲೈ ನೀಡು ನೀಂ ಕೈಯನೊಲವಿನಲಿ.
ಪೌರವ- ಯವನರೂಳಿಗದವನೆ? ತನ್ನವರ ಹಗೆಯೆ?
ಮಾಹುತ- ಬವರದೀ ನಡುವಿನಲಿ ಬಹನೇಕೊ, ತಿಳಿಯೆಂ.
ಪೌರವ- ಬರಲಿ; ಹೇಡಿಗೆ ಸಲುವ ಮನ್ನಣೆಯ ಪಡೆದು ಮರುಗಲಿನಿಸಾದೊಡಂ ತನ್ನ ದುಷ್ಕೃತಿಗೆ.
[ತಕ್ಷಶಿಲೆಯರಸನಾದ ಶಾಂಬರಿಯು ಪ್ರವೇಶಿಸುವನು]
ಶಾಂಬರಿ- ಭಳಿರೆ! ಮೆಚ್ಚಿದೆ ಸಖನೆ ನಿನ್ನ ಸಾಹಸವ. ನಿಲಿಸಿನ್ನು ರಣವ; ಬಲವಂತರೊಳ್ ಹಟವೆ?
ಪೌರವ- ತೊಲಗೆಲವೊ ಶಾಂಬರಿಯೆ; ಸಖನಾರು ನಿನಗೆ? ಕುಲವಂಚಕನ ಕೂಡೆ ಸಖ್ಯವೇನೆನಗೆ?
ಶಾಂಬರಿ- ಸೈರಿಸೆಲೆ ಪೌರವೇಂದ್ರನೆ; ನೀಗು ಚಲವ.
ಸಾರಿರುವೆ ಶೂರತನದೆಲ್ಲೆಗದು ಬರಿದೆ.
ಪ್ರತಿಕೂಲನಿರೆ ಕಾಲನವನನೆದುರಿಸುವಚ
ತುರೆಯ ಫಲವೇನು? ಕಷ್ಟವದು ಬಗೆಯೆ.
ತೊರೆಯಿನ್ನು ಸಾಹಸವ; ಬಿಡು ನಿನ್ನ ಹಟವ
ಅರಿಬಲವ ಮರೆತು ನೀನೆನಿತು ಹೋರಿದಡೇಂ?
ಪೌರವ- ತೆರಳು, ತೆರಳೆಲೆ ನೀಚ, ನಿನ್ನೊಡನೆ ನುಡಿಯೇಂ?
ಗರುವ ಬಿಟ್ಟಿಹ ನಿನ್ನ ಬದುಕೊಂದು ಬದುಕೇಂ?
ಕರೆದು ಯವನನ ನಿನ್ನ ಮನೆಗೆ ಬಾರೆಂದು
ತೆರೆದು ಬಾಗಿಲನವನ ಕರೆದಿತ್ತ ತಂದು
ಸೈರಣೆಯ ಬೋಧಿಪೆಯ-ವಂಶಘಾತಕನೆ?
ಸಾರು ಯವನನ ಬಳಿಗೆ, ಸೇರವನ ಪದವಂ.
ಶಾಂಬರಿ- ಲಾಲಿಸೆಲೆ ಧೀರ ನೀಂಮೇಲುಮೆಯ
ಮಾತ-ಸೋಲುಗೆಲುವುಗಳೆಮ್ಮ ಕೈಯೊಳಿಹುವಲ್ಲ;
ಮೆಚ್ಚಿಹನು ಯವನಪತಿ ನಿನ್ನ ಸಾಹಸವ,
ನಚ್ಚಿ ನೀನವನೊಡನೆ ಸಂಧಿಯನು ಬೇಡು;
ನೀಡುವನು ಮನ್ನಣೆಯ; ನೀಡುವನು ಹಿತವ;
ಮಾಡಿಪೆನು ಸಖ್ಯವನು; ಬಿಡು ನಿನ್ನ ಚಲವ.
ಪೌರವ- ಎಲವೆಲವೊ! ಸಾಕು ನಾಣ್ಚಿಲ್ಲದೀ ಜಾಣ್ಮೆ
ಕುಲಗೇಡಿಗಾವ ಹಟ? ನರಿಗಾವ ನಿಯಮ?
ನಾಡಳಿದು ನಾಡಾಣ್ಮನುಳಿದೊಡೇಂ ಸೊಗಮೋ?
ಬೇಡಿ ರಿಪುಭಿಕ್ಷದಿಂ ಬಾಳ್ದೊಡೇಂ ಜಸಮೋ!
ಹರಿಚಿತ್ತದಂತಕ್ಕೆ! ಪುರುಕುಲದ ರಾಜಂಶಿರವ
ಬಾಗಿದನೆಂಬ ಸೊಲ್ಲಿಲ್ಲದಿರ್ಕೆ.
ಲೇಸ ನೀನೆಳಸುವೊಡೆ ಸಾಕು ಪೋಗಿನ್ನು,
ಸೈಸಲಾರೆನು ಧೂರ್ತದರ್ಶನವನಿನ್ನು,
ಸಾರು ಯವನನ ಬಳಿಗೆ; ಸೇರವನ ಮರೆಯಂ
ತೋರದಿರು ವಂಶವಂಚನೆಯನಿನ್ನಾನುಂ.
[ಮಾಹುತನ ಕಡೆ ತಿರುಗಿ-]
ನಡೆ ಮುಂದೆ, ಮಾಹುತನೆ; ಬಿಡು ಕರಿಯ ಭರದಿ.
ಶಾಂಬರಿ- ಸುಡುವೆನೀ ಗರ್ವವನು; ನೋಡೆನ್ನ ಬಿರುಬ.
[ಹೋಗುವನು]
ಮಾಹುತ- ಅತ್ತ ಬರುತಿದೆ ದೇವ ಪಿರಿಯದೊಂದು ಪಡೆ
ಮುತ್ತುತಿಹುವಾಗಸವ ಕರಿಯ ಮೋಡಗಳು
ವಿಷಮ ವೇಳೆಯೊಳೀಗ ಮಾಳ್ಪುದೇಂ, ದೊರೆಯೆ?
ಪೌರವ- ಅಸುವನರ್ಪಿಸುವಂಗೆ ವಿಷಮವೇಂ, ಸಮವೇಂ?
ತ್ವರಿತದಿಂ ನಡಸು ಹಸ್ತಿಯನತ್ತ ನಿಂತು
ಧುರದ ಮಧ್ಯದಿ ಹೋರಿ ಹರಣಗಳ ಕುಡುವಾ.
[ಸಿಡಿಲು ಮಿಂಚುಗಳ ಹೊಡೆತ]
(೨)
ಅಲೆಗ್ಸಾಂಡರ್- ವೀರ ನೀನೆಲೆ ಸಖನೆ, ಪೌರವೇಶ್ವರನೆ
ತೋರಿದೈ ಸಾಹಸವ, ಕಡುಪರಾಕ್ರಮವ,
ಈ ನಾಡೊಳಿಹರು ನಿನ್ನಂದದವರೆಂದು
ನಾನರಿಯದಾದೆನಾ ಶಾಂಬರಿಯ ನಚ್ಚಿ.
ಪೌರವ- ಆ ಮಾತದಂತಿರಲಿ, ಯವನಪತಿ ನಿನ್ನ
ಸಮರನೀತಿಯಿದೇನು? ನಿನ್ನ ಭಟರೆನ್ನ
ಗಾಯವಡಿಸೆವೆನುತ್ತಲಾಯುಧವ ಬಿಸುಟು,
ಆಯದಿಂ ಪಿಡಿದಿಲ್ಲಿಗೇಕೆ ತಂದಿಹರು?
ಬಾ, ಬಲದ ಕುರುಹಿರ್ದೊಡದನೆನಗೆ ತೋರು
ಈ ಭುಜದ ಸೋಜಿಗವನಿನಿಸು ನೀಂ ನೋಡು
ಧೀರತನವಲ್ತಿಂತು ಸೆರೆವಿಡಿವುದೆನ್ನ
ಹೋರಿ ಜೀವಕೆ ಜೀವವೀವೆನೈ ಮುನ್ನ.
ಅಲೆಗ್ಸಾಂಡರ್- ಎಳಸೆ ನಾಂ ನಿನ್ನಳಿವ; ಪೌರವನೆ ನಿನ್ನ
ಗೆಳೆತನವೆ ಬೇಕೆನಗೆ; ನಾನದರಿನಿವರ
ನಿಯಮಿಸಿದೆ ನಿನ್ನನೈತರಿಪುದೆಂದಿತ್ತ
ಬಯಕೆಯನು ಸಲಿಸುವೆನು; ಬೇಳ್ಬುದೇಂ ಬೆಸಸು.
ಪೌರವ- ಬೇಡುವನು ನಾನಲ್ಲ; ಬೇಳ್ಬುದೇನೆನಗೆ?
ನೀಡುವನು ನೀನಲ್ಲ; ಬೇರೆಯಿರುವನವನ್.
ನ್ಯಾಯದಿಂ ನಡೆವೊಡೆಲೆ ಯವನಪತಿ ಕೇಳು
ರಾಯನಂ ರಾಯನಿದಿರ್ಗೊಳುವಂತೆ ಕಾಣು.
ಅಲೆಗ್ಸಾಂಡರ್- ಧೀರ ನೀನೆಲೆ ಸಖನೆ, ನೀನೆ ಗಂಡುಗಲಿ.
ಬಾರೆಲೈ ನೀಡು ನೀಂ ಕೈಯನೊಲವಿನಲಿ.
To receive the posts on your personal email, pls subscribe to https://groups.google.com/g/todayskagga
Subscribe to:
Posts (Atom)