ದೇಶಭಕ್ತ ಪ್ರತಿಜ್ಞೆ - ವಸಂತ ಕುಸುಮಾಂಜಲಿ - ಡಿವಿಜಿ
(ಗೋಖಲೆಯವರ ದೇಶಸೇವಕ ಸಂಘದ ನಿಬಂಧನೆಗಳಿಂದ)
ಎನ್ನಯ ಮಾನಸ ಭವನದೊ– ।
ಳುನ್ನತ ವೇದಿಯಲಿ ದೇಶಮಾತೆಯನಿರಿಸು– ।
ತ್ತೆನ್ನಯ ಸರ್ವಸ್ವಮನಾ ।
ಪುಣ್ಯೋರ್ವೀದೇವಿಯಂಘ್ರಿಗರ್ಪಿಸಿ ಮಣಿವೆಂ ॥ ೧
ಭಾರತರೊಳ್ ವಂಶಮತಾ– ।
ಚಾರಂ ನೂರಿರೆಯುಮವರದೊಂದೆ ಕುಟುಂಬಂ ॥
ಬೇರೆಣಿಕೆಗಳವರೆಡೆಯೊಳ್ ।
ತೋರದವೊಲ್ ಸೋದರೈಕ್ಯಮಂ ನೆಲೆವಡಿಪೆಂ ॥ ೨
ಕಲಹಿಸೆನಾರೊಳಮ್ ಅರ್ಥದ ।
ಕಲುಷಂಗಳ ದೂರವಿಟ್ಟು ಧೀರಸ್ಮೃತಿಯಂ ॥
ತಳೆದುರದೊಳವರ ಚರಿತೆಯ ।
ಬೆಳಕಿಂದಾಂ ನಡೆದು ಬಾಳ ನೋಂಪಿಯ ಮಾಳ್ಪೆಂ ॥ ೩
ರಾಜಕಟಾಕ್ಷ ಮನುಂ ಜನ– ।
ತಾಜಲ್ಪಶ್ಲಾಘನೆಗಳನುಂ ಗಣಿಸದೆ ನಾಂ ॥
ಭೂಜನನಿಯನೊಮ್ಮನದಿಂ ।
ಪೂಜಿಸುವೆಂ ಸತ್ಯಧರ್ಮಸಂಯಮವಿಧಿಯಿಂ ॥ ೪
ಜನಪದಸೇವೆಯೆ ದೈವಾ ।
ರ್ಚನೆಯದು ನಮಗಾತ್ಮಭಾವವಿಸ್ತಾರನಯಂ ॥
ಅನುಗೊಳುವೆಂ ರಾಷ್ಟ್ರಿಕ ಜೀ– ।
ವನ ಕಾರ್ಯಂಗಳ್ಗೆ ದೀಕ್ಷಿತೋಚಿತ ಮತಿಯಿಂ ॥ ೫
ಮಾನವ ಸಂಸ್ಕಾರಕ ಧ ।
ರ್ಮಾನುವ್ರತಮಕ್ಕೆ ಸಾರ್ವಜನಿಕ ವಿಚಾರಂ ॥
ಜ್ಞಾನಿಯಿನಕ್ಕುಂ ಶುಭ ಸಂ– ।
ಧಾನಂ ರಾಜ್ಯಾದಿಲೌಕಿಕ ವ್ಯವಹೃತಿಯೊಳ್ ॥ ೬
Devanahalli Venkataramanaiah Gundappa, popularly known as DVG, was a Kannada writer and philosopher. He is best known for Manku Thimmana Kagga
Sunday, 10 March 2024
Saturday, 9 March 2024
ಶ್ರೀ ಕೃಷ್ಣರಾಜೇಂದ್ರ ಒಡೆಯರವರು - ವಸಂತ ಕುಸುಮಾಂಜಲಿ - ಡಿವಿಜಿ
ಶ್ರೀ ಕೃಷ್ಣರಾಜೇಂದ್ರ ಒಡೆಯರವರು - ವಸಂತ ಕುಸುಮಾಂಜಲಿ - ಡಿವಿಜಿ
ನಿಖಿಲಕರ್ಣಾಟಜನಸಂತೋಷಸಾಧನಂ
ಭಾರತಾವನಿಪಾಲಕುಲಕಿರೀಟಂ ।
ಸ್ಮಾರ್ತಲೋಕಾಧಾರಸಿಂಹಪೀಠಸ್ಥಿತಂ
ಆರ್ಯವಿಹಿತಾಚಾರಧರ್ಮಶೀಲಂ ।
ದೇಶಭಾಷಾಪ್ರೇಮಸಂಪೂರ್ಣಮಾನಸಂ
ದೇವಪೂಜಾನಿರತನಮಲಚರಿತಂ ।
ಪೌರಸ್ತ್ಯಪಾಶ್ಚಾತ್ಯವೈದುಷ್ಯಸಂಯೋಗ
ಸಂಜನಿತ ಶುಭಗುಣಾದರ್ಶಮಹಿಮಂ ॥
ಪ್ರಜೆಯ ಸೇವೆಯೆ ದೇವಸೇವೆಯೆಂದರಿತು ಸತತಂ ।
ಚತುರಸಚಿವರನೊಂದಿ ಜನತೆಯೊಳ್ ಜಸಮನೊಂದಿ ।
ಸಕಲಸಂಪತ್ಸೌಖ್ಯಯೋಗದಿಂ ಪುಣ್ಯಪಥದೊಳ್ ।
ರಾಜಿಸಿದ ರಾಜನೀ ಶ್ರೀಕೃಷ್ಣ ಭೂಮಿಪಾಲಂ ॥
ನಿಖಿಲಕರ್ಣಾಟಜನಸಂತೋಷಸಾಧನಂ
ಭಾರತಾವನಿಪಾಲಕುಲಕಿರೀಟಂ ।
ಸ್ಮಾರ್ತಲೋಕಾಧಾರಸಿಂಹಪೀಠಸ್ಥಿತಂ
ಆರ್ಯವಿಹಿತಾಚಾರಧರ್ಮಶೀಲಂ ।
ದೇಶಭಾಷಾಪ್ರೇಮಸಂಪೂರ್ಣಮಾನಸಂ
ದೇವಪೂಜಾನಿರತನಮಲಚರಿತಂ ।
ಪೌರಸ್ತ್ಯಪಾಶ್ಚಾತ್ಯವೈದುಷ್ಯಸಂಯೋಗ
ಸಂಜನಿತ ಶುಭಗುಣಾದರ್ಶಮಹಿಮಂ ॥
ಪ್ರಜೆಯ ಸೇವೆಯೆ ದೇವಸೇವೆಯೆಂದರಿತು ಸತತಂ ।
ಚತುರಸಚಿವರನೊಂದಿ ಜನತೆಯೊಳ್ ಜಸಮನೊಂದಿ ।
ಸಕಲಸಂಪತ್ಸೌಖ್ಯಯೋಗದಿಂ ಪುಣ್ಯಪಥದೊಳ್ ।
ರಾಜಿಸಿದ ರಾಜನೀ ಶ್ರೀಕೃಷ್ಣ ಭೂಮಿಪಾಲಂ ॥
Friday, 8 March 2024
ಮೋಹನದಾಸ್ ಕರಮಚಂದ್ ಗಾಂಧಿ - ವಸಂತ ಕುಸುಮಾಂಜಲಿ - ಡಿವಿಜಿ
ಮೋಹನದಾಸ್ ಕರಮಚಂದ್ ಗಾಂಧಿ - ವಸಂತ ಕುಸುಮಾಂಜಲಿ - ಡಿವಿಜಿ
ಇಂದ್ರಿಯಂಗಳ ಜಯಿಸಿ ಚಿತ್ತಶುದ್ಧಿಯ ಬಯಸಿ
ಲೋಭಮಂ ತ್ಯಜಿಸಿ ರೋಷವ ವರ್ಜಿಸಿ ।
ಸರ್ವಸಖ್ಯವ ಭಜಿಸಿ ತೃಪ್ತತೆಯನಭ್ಯಸಿಸಿ
ಸತ್ಯಪಾಲನೆಯೊಂದ ಮನದೊಳಿರಿಸಿ ।
ಕಾಯಕಷ್ಟವ ಸಹಿಸಿ ವೈರಿಗಣಮಂ ಕ್ಷಮಿಸಿ
ಸರ್ವಸಮತೆಯ ಗಳಿಸಿ ಶಮವನರಸಿ ।
ಸ್ವಾತ್ಮಶಿಕ್ಷಣಮೇ ಸ್ವರಾಜ್ಯಮೆನ್ನುತ ವಚಿಸಿ
ದೇಶಸೇವೆಯನೀಶಸೇವೆಯೆನಿಸಿ ॥
ಸಾಧುವೃತ್ತಿಯ ಪಥವ ತನ್ನ ಬಾಳಿನೊಳೆ ತೋರಿ ।
ಪಾಶವೀ ಬಲದ ದೌರ್ಬಲ್ಯಮಂ ವಿಶದಬಡಿಸಿ ।
ಪಾಶ್ಚಾತ್ಯ ಜನಕಮಧ್ಯಾತ್ಮನೀತಿಯನು ಪೇಳ್ದಾ ।
ದೈವಸಂಪನ್ಮಾರ್ಗದರ್ಶಕಂ ಗಾಂಧಿಯಲ್ತೆ ॥
ಸರ್ವಸಖ್ಯವ ಭಜಿಸಿ ತೃಪ್ತತೆಯನಭ್ಯಸಿಸಿ
ಸತ್ಯಪಾಲನೆಯೊಂದ ಮನದೊಳಿರಿಸಿ ।
ಕಾಯಕಷ್ಟವ ಸಹಿಸಿ ವೈರಿಗಣಮಂ ಕ್ಷಮಿಸಿ
ಸರ್ವಸಮತೆಯ ಗಳಿಸಿ ಶಮವನರಸಿ ।
ಸ್ವಾತ್ಮಶಿಕ್ಷಣಮೇ ಸ್ವರಾಜ್ಯಮೆನ್ನುತ ವಚಿಸಿ
ದೇಶಸೇವೆಯನೀಶಸೇವೆಯೆನಿಸಿ ॥
ಸಾಧುವೃತ್ತಿಯ ಪಥವ ತನ್ನ ಬಾಳಿನೊಳೆ ತೋರಿ ।
ಪಾಶವೀ ಬಲದ ದೌರ್ಬಲ್ಯಮಂ ವಿಶದಬಡಿಸಿ ।
ಪಾಶ್ಚಾತ್ಯ ಜನಕಮಧ್ಯಾತ್ಮನೀತಿಯನು ಪೇಳ್ದಾ ।
ದೈವಸಂಪನ್ಮಾರ್ಗದರ್ಶಕಂ ಗಾಂಧಿಯಲ್ತೆ ॥
Thursday, 7 March 2024
ಮೋಕ್ಷಗುಂಡಂ ವಿಶ್ವೇಶ್ವರಯ್ಯ - ವಸಂತ ಕುಸುಮಾಂಜಲಿ - ಡಿವಿಜಿ
ಮೋಕ್ಷಗುಂಡಂ ವಿಶ್ವೇಶ್ವರಯ್ಯ - ವಸಂತ ಕುಸುಮಾಂಜಲಿ - ಡಿವಿಜಿ
ಜನಪದವೆ ದೇವನಿಲಯಂ ।
ಜನಸೇವೆಯೆ ದೇವಪೂಜೆಯೆನುತುಂ ಸತತಂ ॥
ಘನಸಚಿವಧರ್ಮಮಾರ್ಗವ- ।
ನನುಸರಿಸಿದನೀತನಲ್ತೆ ಸುಜನಪ್ರೀತಂ ॥
ಭಜಕರ ಭಕ್ತಿಯ ಬಗೆಯದೆ
ನಿಜಕರುಣೆಯನೆಂತು ರ್ಯಾಜದೇವತೆ ತೋರ್ಕುಂ ॥
ಪ್ರಜೆಯಂತೆಯೆ ರಾಜ್ಯಮೆನು ।
ತ್ತಜಸ್ರಮುಂ ಸಾರಿ ಪೇಳ್ದನೀತಂ ಖ್ಯಾತಂ ॥
ಪರಮೋತ್ಸಾಹಸಮನ್ವಿತಂ ಪರಹಿತೋದ್ಯೋಗೈಕಬದ್ಧಾದರಂ ।
ಸ್ಥಿರಸಂಕಲ್ಪನತಂದ್ರಯತ್ನನತುಲಪ್ರಾಗಲ್ಭ್ಕ ಶೌರ್ಯೋಜ್ಜ್ವಲಂ ॥
ತರುಣರ್ಗೆಂದುಮಮಂದಪೌರುಷ ನಯೌದಾರ್ಯಂಗಳಂ ಬೋಧಿಪಾ ।
ಗುರುವಾಗಿರ್ಕೆ ಗುಣಾಕರಂ ಬುಧವರಂ ವಿಶ್ವೇಶ್ವರಾರ್ಯಂ ಚಿರಂ ॥
ಜನಪದವೆ ದೇವನಿಲಯಂ ।
ಜನಸೇವೆಯೆ ದೇವಪೂಜೆಯೆನುತುಂ ಸತತಂ ॥
ಘನಸಚಿವಧರ್ಮಮಾರ್ಗವ- ।
ನನುಸರಿಸಿದನೀತನಲ್ತೆ ಸುಜನಪ್ರೀತಂ ॥
ಭಜಕರ ಭಕ್ತಿಯ ಬಗೆಯದೆ
ನಿಜಕರುಣೆಯನೆಂತು ರ್ಯಾಜದೇವತೆ ತೋರ್ಕುಂ ॥
ಪ್ರಜೆಯಂತೆಯೆ ರಾಜ್ಯಮೆನು ।
ತ್ತಜಸ್ರಮುಂ ಸಾರಿ ಪೇಳ್ದನೀತಂ ಖ್ಯಾತಂ ॥
ಪರಮೋತ್ಸಾಹಸಮನ್ವಿತಂ ಪರಹಿತೋದ್ಯೋಗೈಕಬದ್ಧಾದರಂ ।
ಸ್ಥಿರಸಂಕಲ್ಪನತಂದ್ರಯತ್ನನತುಲಪ್ರಾಗಲ್ಭ್ಕ ಶೌರ್ಯೋಜ್ಜ್ವಲಂ ॥
ತರುಣರ್ಗೆಂದುಮಮಂದಪೌರುಷ ನಯೌದಾರ್ಯಂಗಳಂ ಬೋಧಿಪಾ ।
ಗುರುವಾಗಿರ್ಕೆ ಗುಣಾಕರಂ ಬುಧವರಂ ವಿಶ್ವೇಶ್ವರಾರ್ಯಂ ಚಿರಂ ॥
Wednesday, 6 March 2024
ಜಗದೀಶ ಚಂದ್ರ ಬೋಸ್ - ವಸಂತ ಕುಸುಮಾಂಜಲಿ - ಡಿವಿಜಿ
ಜಗದೀಶ ಚಂದ್ರ ಬೋಸ್ - ವಸಂತ ಕುಸುಮಾಂಜಲಿ - ಡಿವಿಜಿ
ಶ್ರೀ ಭಾರತೀ ತಾಯ ವಿಜ್ಞಾನದೈಸಿರಿಯ
ಲೋಕದೊಳ್ ವಿಸ್ತರಿಪ ಕುವರನೆನಿಸಿ ।
ಕಪಿಲ ಕಾಣಾದಾದಿ ಸದಸದ್ವಿಚಾರಕರ
ಕುಲದ ಕೀರ್ತಿಗೆ ರನ್ನಗಲಶವೆನಿಸಿ ।
ನರನವೊಲೆ ತರುಗಳುಂ ಸುಖದುಃಖಗಳನರಿವ
ಪರಿಯ ತೋರುವ ಯಂತ್ರಚಯವ ರಚಿಸಿ ।
ಅಣುರೇಣು ತೃಣಗಳೊಳಮಮಲ ಚೈತನ್ಯವಿಹ
ಮರ್ಮವಂ ಲೋಚನಕೆ ವಿಷಯಮೆನಿಸಿ ॥
ಭೌತತಾತ್ವಿಕ ಶಾಸ್ತ್ರ ಸಾಮ್ರಾಜ್ಯ ರಾಜನೆನಿಸಿ ।
ವಿಶ್ವಸೃಷ್ಟಿಯ ಚತುರತೆಯ ವಿಶದಗೊಳಿಸಿ ।
ಕಣ್ಗೆ ಕಾಣದ ತತ್ತ್ವಮಂ ಶ್ರಮಿಸುತರಸಿ ।
ಮೆರೆವನೀ ಜಗದೀಶನಾರ್ಯಕುಲತೋಷಂ ॥
ಪರತತ್ತ್ವವನರಿವೊಡೆಯುಂ ।
ಸಿರಿಯಂ ಸುಖಮಂ ಸುಕೀರ್ತಿಯಂ ಪಡೆವೊಡೆಯುಂ ॥
ಅರಿಭೀತಿಯ ಕಳೆವೊಡೆಯುಂ ।
ತಿರೆಯೊಳ್ ವಿಜ್ಞಾನಮೊಂದೆ ಸಾಧನಮಲ್ತೇ ॥
ಆ ವಿಜ್ಞಾನಕಲಾರಹಸ್ಯಗಳ ತಾವನ್ವೇಷಿಸುತ್ತಂ ಸುಹೃ– ।
ದ್ಭಾವಂದಾಳ್ದು ಜಗಕ್ಕೆ ಬೋಧಿಸುತುಮಂತೆಂದುಂ ಜಗತ್ಕರ್ತನಾ ॥
ಸೇವಾಕಾರ್ಯದಿ ದೀಕ್ಷೆಯೊಂದಿ ನಿಜದೇಶೀಯರ್ ಶುಭಂಬೊಂದಲೆಂ– ।
ದಾ ವಿಖ್ಯಾತ ಮಹಾಶಯಂ ರಚಿಸಿಹಂ ಚಿಜ್ಜ್ಯೋತಿಯಾಗಾರಮಂ ॥
Tuesday, 5 March 2024
ರವೀಂದ್ರನಾಥ ಠಾಕೂರ್ - ವಸಂತ ಕುಸುಮಾಂಜಲಿ - ಡಿವಿಜಿ
ರವೀಂದ್ರನಾಥ ಠಾಕೂರ್ - ವಸಂತ ಕುಸುಮಾಂಜಲಿ - ಡಿವಿಜಿ
ರವಿಯರಿಯದ ಮರ್ಮಗಳಂ ।
ಕವಿಯರಿತವನೆಂದು ಲೋಕಮೊರೆವುದು ಪುಸಿಯೇಂ ॥
ರವಿ ಬೆಳಗೆ ಬಾಹ್ಯಲೋಕವ ।
ಕವಿ ಬೆಳಗಿಪನಲ್ತೆ ಜನರ ಹೃದಯಾನ್ತರಮಂ ॥
ಋಷಿಬಲಮಿಲ್ಲದವಂ ಕವಿ ।
ವೃಷನೆನಿಪುದಶಕ್ಯಮೆಂದು ಬಗೆವುದು ಸಾಜಂ ॥
ಋಷಿಹೃದ್ಗತ ಚಿನ್ಮೂರ್ತಿಯ ।
ಸುಷಮಾಪ್ರತಿಫಲಮೆ ಕಾವ್ಯವನಿತಾವಿಭವಂ ॥
ಪದಬಾಹುಳ್ಯದಿನಪ್ರಸಿದ್ಧ ಪದವೈಚಿತ್ರ್ಯಾಳಿಯಿಂ ಶ್ಲೇಷೆಯಿಂ ।
ಪದುಳಂಗೊಳ್ವಳದೆಂತು ಕಾವ್ಯವಧು ತಾಂ ಕಾಠಿನ್ಯಮಂ ತೋರಳೇಂ ॥
ಹೃದಯಾಬ್ಜಂ ರಸಪೂರ್ಣಮಾಗಿ ಕವಿಯೊಳ್ ಪ್ರಜ್ಞಾರುಣೋದ್ದೀಪ್ತಿಯಿಂ । ಪದಸೌಭಾಗ್ಯಮರಂದಮುಣ್ಮೆ ಕವಿತಾಶ್ರೀರೂಪಮುಜ್ಜೃಂಭಿಕುಂ ॥
ಜೀವಲೋಕದೊಳಳ್ತಿಯಿಂ ಸಮ ।
ಭಾವದಿಂದಲಿ ವರ್ತಿಸುತ ಪರ ।
ದೇವಲೀಲೆಯೆ ಲೌಕಿಕವ್ಯಾಪಾರಮೆಂದೆಣಿಸಿ ॥
ಸಾವಧಾನದಿ ವರ್ಣಿಸುತಲದ ।
ತೀವಿದಾನಂದದಲಿ ತನ್ನೊಳು ।
ಭಾವಿಪಂ ತಾನಲ್ತೆ ಕವಿ ಬೇರೊಂದು ಲೋಕವನು ॥
ತಾನೆ ಜಗಂಗಳ ಕಲ್ಪಿಸುತುಂ ಸ್ವಾ ।
ಧೀನತೆಯೊಳ್ಮುದಮೊಂದುತಲೆಂದುಂ ॥
ಜ್ಞಾನಧನಂ ಕವಿ ಧೀರನುದಾರಂ ।
ಮಾನಸರಾಜ್ಯಕೆ ರಾಜನೆನಿಪ್ಪಂ ॥
Monday, 4 March 2024
ಬಾಲಗಂಗಾಧರ ತಿಲಕರು - ವಸಂತ ಕುಸುಮಾಂಜಲಿ - ಡಿವಿಜಿ
ಬಾಲಗಂಗಾಧರ ತಿಲಕರು - ವಸಂತ ಕುಸುಮಾಂಜಲಿ - ಡಿವಿಜಿ

ತಾಮಸಾವೃತರಾಗಿ ನಿಜಜನರ್ ನಿದ್ರಿಸಿರ–
ಲವರನೆಳ್ಚರಿಸಿದಾ ಧೀರನಾರು? ।
ದೇಶೀಯರಾತ್ಮಗೌರವವ ಮರೆತಿರಲಂದು
ದೇಶಮಹಿಮೆಯ ಸಾರಿ ಪೇಳ್ದನಾರು? ।
ರಾಷ್ಟ್ರಜನನಿಯುಡುಂಗಿರಲ್ ಪಾರತಂತ್ರ್ಯದಲಿ
ಸ್ವಾತಂತ್ರ್ಯವೇಕೆ ತನಗೆಂದನಾರು? ।
ದಾಸ್ಯದೊಳ್ ವೈಭವದಿ ನಲಿದು ಮೆರೆವುದಕಿಂತ
ಸೆರೆಮನೆಯೆ ತನಗೆ ಲೇಸೆಂದನಾರು? ॥
ತಿಲಕನಲ್ಲವೆ ಜಾನಪದಕಾರ್ಯಚತುರತಿಲಕಂ ।
ವಿಬುಧಸಂಕುಲತಿಲಕನಾರ್ಯಭೂಭೃತ್ಯತಿಲಕಂ ।
ಆತನೆಂದುಂ ಭರತಬಾಲಕರ ಮನದಿ ನಿಂದು ।

ತಾಮಸಾವೃತರಾಗಿ ನಿಜಜನರ್ ನಿದ್ರಿಸಿರ–
ಲವರನೆಳ್ಚರಿಸಿದಾ ಧೀರನಾರು? ।
ದೇಶೀಯರಾತ್ಮಗೌರವವ ಮರೆತಿರಲಂದು
ದೇಶಮಹಿಮೆಯ ಸಾರಿ ಪೇಳ್ದನಾರು? ।
ರಾಷ್ಟ್ರಜನನಿಯುಡುಂಗಿರಲ್ ಪಾರತಂತ್ರ್ಯದಲಿ
ಸ್ವಾತಂತ್ರ್ಯವೇಕೆ ತನಗೆಂದನಾರು? ।
ದಾಸ್ಯದೊಳ್ ವೈಭವದಿ ನಲಿದು ಮೆರೆವುದಕಿಂತ
ಸೆರೆಮನೆಯೆ ತನಗೆ ಲೇಸೆಂದನಾರು? ॥
ತಿಲಕನಲ್ಲವೆ ಜಾನಪದಕಾರ್ಯಚತುರತಿಲಕಂ ।
ವಿಬುಧಸಂಕುಲತಿಲಕನಾರ್ಯಭೂಭೃತ್ಯತಿಲಕಂ ।
ಆತನೆಂದುಂ ಭರತಬಾಲಕರ ಮನದಿ ನಿಂದು ।
ನೀಡುಗವರಿಗೆ ದೇಶಕೈಂಕರ್ಯಧೈರ್ಯಭರಮಂ ॥
Subscribe to:
Posts (Atom)
.jpeg)

.jpeg)
.jpeg)
