ಗಿರಿ ಕಾನನಂಗಳೊಳ್ ಮುನಿ
ವರರಂ ಪರವಶರ ಗೈದ ಬೆಡಗೆಂತಹುದೆಂ ॥
ದರಿವೊಡೆ ತೆರಳ್ದು ಜೋಗಕೆ ।
ನಿರುಕಿಪುದಾ ನಿರ್ಝರ ಪ್ರಪಾತಾದ್ಭುತಮಂ ॥ ೧ ॥
ಪರದೈವಕ್ಕರ್ಘ್ಯಮನಾ ।
ದರದಿಂದಂ ಪ್ರಕೃತಿಯೀವ ತೆರನಿದೊ ಮೇಣೀ ॥
ಧರಣಿಯ ಸಂತಾಪವ ಪರಿ ।
ಹರಿಸಲ್ ವನದೇವಿ ಗೈವ ಸೇಕಮೊ ತಿಳಿಯೆಂ ॥ ೨ ॥
ಧೂರ್ಜಟಿ ಕಿರೀಟದಿಂದಾ ।
ಸ್ಫೂರ್ಜದ್ಗಂಗಾವರೋಹಮಾದ ಕ್ರಮಮಂ ॥
ಗರ್ಜಿತದಿಂ ಗಹನತೆಯಿಂ ।
ದೂರ್ಜಸ್ವತಿ ತೋರುತೀ ಶರಾವತಿಯಿಳಿವಳ್ ॥ ೩ ॥
ಒಂದೆಡೆ ವಕ್ರ ಶಿಲೋಚ್ಚಯ ।
ಮೊಂದೆಡೆ ವಿಸ್ತೃತ ಗಂಭೀರ ಭೀಕರ ಗರ್ತಂ ॥
ಸಂದಿರೆ ವಿಪಿನಾಂತರದೊಳ ।
ಮಂದ ಪ್ರಗತಿಯಿನುರುಳ್ವ ನದಿಯೇಂ ಸ್ಮಯಮೋ ॥ ೪ ॥
ಕ್ಷೀರಾಸೇಚನ ಧಾರೆಯಂತೆ ಸುರಿವಾ ನೀರ ಪ್ರವಾಹಂಗಳುಂ ।
ಸ್ಫಾರನ್ಮೌಕ್ತಿಕ ವೃಷ್ಟಿಯಂತೆ ಪೊಳೆವಾ ಬಿಂದು ಪ್ರವರ್ಷಂಗಳುಂ ॥
ಧಾರಾಭೃನ್ನಿ ಕರಂಬೊಲಾಡಿ ಸುಳಿವಾ ಫೇನ ಪ್ರತಾನಂಗಳುಂ ।
ತೋರುತ್ತಿರ್ಪುವದೊಂದು ಚಿತ್ರವ ಜನಕ್ಕಾ ಚೆಲ್ವನಾರ್ ಬಣ್ಣಿಪರ್ ॥ ೫ ॥
ಅತಿ ಗಾಂಭೀರ್ಯದಿ ಸಾರ್ವುದೇಂ ಮಗುಳೆ ನೀನೌದ್ಧತ್ಯದಿಂ ಪಾರ್ವುದೇಂ ।
ಲತೆಯಂತಾಡಿ ವಿಲಾಸದಿಂ ಸರಿವುದೇಂ ಶೈಲಾಗ್ರದಿಂ ಬೀಳ್ವುದೇಂ ॥
ಕ್ಷಿತಿಯೆಂದೇಳುತೆ ನಾಟ್ಯದಿಂ ನಲಿವುದೇಂ ಪಾತಾಳಮಂ ಸೇರ್ವವೋಲ್ ।
ಖತಿಗೊಂಡೋಡುವುದೇಂ ಶರಾವತಿಯಿದೇಂ ನಿನ್ನಾಯಮಂ ಬಲ್ಲರಾರ್ ॥ ೬ ॥
ಶಮಮಂ ಸೂಸುವೆ ಮತ್ತಂ ।
ರಮಣೀಯಾಕೃತಿಯನಾಂತು ಬಳುಕುವೆ ಮೇಣ್ ಸಂ ॥
ಭ್ರಮಿಸುತೆ ಘೋರಾವಟದೊಳ್ ।
ಗಮಿಸುವೆ ನಿನ್ನಯ ವಿಲೋಲ ಭಾವಮಿದೇನೌ ॥ ೭ ॥
ದಿವಸೇಶ್ವರಂಗೆ ನಲವಿಂ ।
ನವರತ್ನಚ್ಛವಿಯ ತೋರಿ ದರ್ಶದ 1 ನಿಶೆಯೊಳ್ ॥
ಧವಳಾಂಶುವಾಗಿ ತಾರಾ ।
ಧವನಂ ನೀನರಸಿ ಮೊರೆವುದೇಂ ಚಪಲತೆಯೋ ॥ ೮ ॥
ಇದು ಸೃಷ್ಟಿಯ ಹಾಸಮೊ ಮೇ ।
ಣಿದು ಧಾತ್ರಿಯ ಭಾಷ್ಪ ಸಲಿಲ ಧಾರೆಯೋ ನೋಳ್ಪ ॥
ರ್ಗಿದು ನವನವಮೆನಿಸುತೆ ತೋ ।
ರ್ಪುದದೊಂದಗ್ಗದ ಸರೌದ್ರ ಸಂಮೋಹನಮಂ ॥ ೯ ॥
ಮೈಸೂರು ಬಂಗಲೆ, ಜೋಗ
ಅಮಾವಾಸ್ಯೆ, ಕಾರ್ತಿಕ
೭ ನೆಯ ಡಿಸೆಂಬರ್ ೧೯೨೩.
Devanahalli Venkataramanaiah Gundappa, popularly known as DVG, was a Kannada writer and philosopher. He is best known for Manku Thimmana Kagga
Tuesday, 6 February 2024
Sunday, 4 February 2024
ಕೊಡಗಿನ ಬೆಡಗು - ನಿವೇದನ - ಡಿವಿಜಿ
*ಕೊಡಗಿನ ಬೆಡಗು - ನಿವೇದನ - ಡಿವಿಜಿ*
(ತಲಕಾವೇರಿಯ ಬಳಿ–ಬ್ರಹ್ಮಗಿರಿಯ ಮೇಲಿನಿಂದ)ಬಿದಿಯದ್ಭುತ ಕಾರ್ಯಾಂಗಣ ।
ಮಿದು ಸೃಷ್ಟಿಯ ರತ್ನಪೇಟಿಯಲ್ಲದೊಡಿಂತ ॥
ಗ್ಗದ ಚಿತ್ರದಿ ಸೇರ್ದಪುವೇಂ ।
ಹ್ರದಿನೀ ಗಿರಿ ಕಂದರಾಟವೀ ವಿಭವಂಗಳ್ ॥ ೧ ॥
ಈ ವಿಭವಮುಮೀ ಬೆಡಗುಂ ।
ಭಾವೋತ್ಕರ್ಷವನೊಡರ್ಚುವೀ ರಮ್ಯತೆಯುಂ ॥
ದೈವ ಪ್ರಸಾದ ಲಹರಿಯ ।
ಕಾವೇರಿಯ ಜನನಸದನಕಲ್ಲದೆ ಸರಿಯೇಂ ॥ ೨ ॥
ಭುವನ ಕುಲಾಲನೀ ಗಿರಿಯ ನಾಭಿಯನಾಗಿಸಿ ತನ್ನ ಚಕ್ರಮಂ ।
ಜವದಿ ಪರಿಭ್ರಮಂಗೊಳಿಸೆ ಪುಟ್ಟಿದ ವರ್ತುಲ ಜಾಲಮೇನೆನಿ ॥
ಪ್ಪವೊಲೆಸೆಯುತ್ತುಮಿರ್ಪುದಿದರೆಣ್ದೆಸೆಯೊಳ್ ವನಶೋಭಿ ಪರ್ವತ ।
ಪ್ರವಲಯ ಪಂಕ್ತಿಯಚ್ಚರಿಯ ಬೀರುತೆ ಲೋಚನಮೋಡುವನ್ನೆಗಂ ॥ ೩ ॥
ಜಲಧಿಯನನುಕರಿಸುವೆನೆಂ ।
ದಿಳೆಯುಂ ತಾಂ ಕರಗಿ ಪರಿದು ನೆರೆ ಬೀಗುತೆ ಪೇ ॥
ರಲೆಗಳ ತಳೆದಿರ್ಪಂದದಿ ।
ವಿಲಸಿಪುವಾ ವಿಪುಲ ಶೈಲ ಸರಣಿಯ ಸಾಲ್ಗಳ್ ॥ ೪ ॥
ಧರಣಿಯ ಸುಕೃತ ಚಯಂಗಳ್ ।
ಸುರಪದಸೋಪಾನಮೆಂದು ಗಿರಿಶಿಖರಗಳೊಳ್ ॥
ನೆರೆದಿಹುವೇನೆನಿಪಂದದಿ ।
ಮರೆದಪುದಾ ಧವಳ ಮೇಘ ಮಂಡಲ ವಿಸರಂ ॥ ॥ ೫ ॥
ವಿಶ್ವಶಿಲ್ಪಿಯ ಚಿತ್ರ ಚಾತುರಿಯ ಬಗೆಗೊಳಿಪ
ವಿವಿಧ ವರ್ಣಾಕಾರ ಪಟಲದಿಂದಂ ॥
ಸ್ವಾತಂತ್ರ್ಯ ಸಾಮ್ರಾಜ್ಯ ಗರ್ವಚೇಷ್ಟಿತಮೆನಿಪ
ಶಾಖೋಪಶಾಖಾ ಪ್ರತಾನದಿಂದಂ ।
ಮಂದ ಪರಿಮಳಿತ ಶೀತಲ ವಾತ ಸಂಚಲಿತ
ಕುಸುಮ ಕಿಸಲಯ ಫಲಪ್ರಕರದಿಂದಂ ।
ಶಬ್ದಸರ್ವಸ್ವಾವತಾರಮೆಂದೆನಿಪ ಮೃಗ
ವಿಹಗ ಕೀಟಕ ಕೋಟಿ ನಾದದಿಂದಂ ॥
ಸೊಗಯಿಪಾ ತರುಗುಲ್ಮ ಲತೆಗಳಿಂ ನಿಬಿಡಮಾಗಿ ।
ರವಿಯನವಗಡಿಸಿ ಯೋಜನಶತವನಿಂಬುಗೊಳಿಸಿ ।
ಸೃಷ್ಟಿಮಾಹಾತ್ಮ್ಯ ಸಂಸ್ಫೂರ್ತಿ ಪ್ರಕೀರ್ತಿಯೆನಿಸಿ ।
ಮಾತ ಮೂದಲಿಸುತಿಹುದೀ ಮಹಾರಣ್ಯ ಸರಣಿ ॥ ೬ ॥
ಗಿರಿಗಳ ಕಂದರಗಳ ನಿ ।
ರ್ಝರಗಳ ವಿಪಿನಗಳ ವಕ್ರಪಥಗಳ ದರ ಸುಂ ॥
ದರ ಶಮಕರ ರೂಪಂಗಳ ।
ನರಿವೊಡೆ ನೀಂ ನಡೆದು ನೋಡು ಕೊಡಗಿನ ಬೆಡಗಂ ॥ ೭ ॥
ಪ್ರಕೃತಿಯ ನರ್ತನರಂಗಂ ।
ಸುಕೃತಾತ್ಮರಿಗಿದುವೆ ಲೋಚನೋತ್ಸವರಂಗಂ ॥
ಅಕೃತಕ ಕವಿತಾ ರಂಗಂ ।
ವಿಕೃತಮನಸ್ಕರಿಗಿದೊಂದು ಶಾಂತಿಯರಂಗಂ ॥ ೮ ॥
(21ನೆಯ ನವಂಬರ್ 1923)
Saturday, 3 February 2024
ನಿವೇದನ - ಡಿವಿಜಿ
ಮೇಲೆ ನೋಡೆ ಕಣ್ಣ ತಣಿಪ
ನೀಲ ಪಟದಿ ವಿವಿಧ ರೂಪ
ಜಾಲಗಳನು ಬಣ್ಣಿಸಿರ್ಪ
ಚಿತ್ರ ಚತುರನಾರ್ ।
ಕಾಲದಿಂದೆ ಮಾಸದಾ ವಿ
ಚಿತ್ರವೆಸಪನಾರ್ ॥ ೧ ॥
ಸುತ್ತ ಪೊಳೆವ ಶೈಲಗಣದ
ಕೊತ್ತಲಂಗಳಿಟ್ಟು ಕಡಲ
ಸುತ್ತುಗಟ್ಟಿ ಕೋಟೆಯಿದನು
ಕಲ್ಪಿಸಿರ್ಪನಾರ್ ।
ವಸ್ತುಚಯವನಿಂತು ರಚಿಪ
ಶಿಲ್ಪಿವರ್ಯನಾರ್ ॥ ೨ ॥
ಗಿರಿಯ ತೊರೆಯ ಬನದ ಹೊಲದ
ಬೆರಗಿನಿಂದೆ ಮೃಗದ ಖಗದ
ಮೆರೆತದಿಂದಲೀ ವಿಹಾರ
ಭವನವೆಸಪನಾರ್ ।
ಮರೆಯಲಿರ್ದು ಸೊಗವನಿಂತು
ಕವಿಸುತಿರ್ಪನಾರ್ ॥ ೩ ॥
ಜ್ಯೋತಿಗಳನು ಗಗನ ತಲದಿ
ಗೀತಗಳನು ವಿಹಗ ಮುಖದಿ
ಪ್ರೀತಿಗಳನು ಜನದ ಮನದಿ
ತೋರುತಿರ್ಪನಾರ್ ।
ಮಾತನುಳಿದ ಕವಿತೆಯಿಂತು
ಬೀರುತಿರ್ಪನಾರ್ ॥ ೪ ॥
ಅವನ ಕೃತಿಯ ನೋಡಿ ಮಣಿವೆ
ವವನ ದನಿಯ ಕೇಳೆ ನಲಿವೆ
ವವನ ಭಿಕ್ಷೆಯುಂಡು ಬೆಳೆವೆ
ವವನನರಿಯೆವು ।
ಅವನ ಲೀಲೆಗಳನು ಕಾಣ್ಬೆ
ವವನ ಕಾಣೆವು ॥ ೫ ॥
ರವಿಗೆ ಬೆಳಕ ಭುವಿಗೆ ಬಲವ
ಜವವ ವಾಯುಗೀವ ತೆರದಿ
ಕವಿಯ ವಚನಕವನೆ ಸರಸ
ಭಾವವೀವನು ।
ಅವನೆ ಶಿಲ್ಪ ಚಿತ್ರಕೃತಿಗೆ
ಜೀವವೀವನು ॥ ೬ ॥
ಪಿಡಿದು ಗುರುವೆನುತ್ತಲಾತ
ನಡಿಯ ಮನದೊಳವನ ಬಲದೆ
ನುಡಿಯಲರಿತ ಕವಿಯೆ ಜಗದಿ
ಧನ್ಯನು ।
ಮುಡುಪನವಗೆ ಸಲಿಪ ಶಿಲ್ಪಿ
ವರನೆ ಗಣ್ಯನು ॥ ೭ ॥
ಮನಕೆ ತೋರ್ಪೆ ಸೊಬಗನೆಲ್ಲ
ತನಗೆ ತುಷ್ಟಿಯಪ್ಪ ತೆರದಿ
ಜನಕೆ ನುಡಿಯಲರಿತ ಸುಕವಿ
ತಿಲಕನಾತನು ।
ಅನುವಿನಿಂದ ಬರೆವ ಕಲೆಯ
ಕಲಿತನಾತನು ॥ ೮ ॥
ಅನಿತು ಗುರುವಿನೊಲುಮೆಯಿಲ್ಲ
ವನಿತು ಮತಿಯೊಳೆಸಕಮಿಲ್ಲ
ವಿನಿಸು ಭಕುತಿ ಮಾತ್ರವೆನ್ನ
ನುಡಿಸುತಿರ್ಪುದು ।
ಜನುಮ ಭುವಿಯ ಮಮತೆ ಬಾಯ
ಬಿಡಿಸುತಿರ್ಪುದು ॥ ೯ ॥
ಉನ್ನತಾಚಲವನು ಮಸಕು
ಗನ್ನಡಿಯಲಿ ತೋರಲೆಳಸು
ವೆನ್ನಕಜ್ಜವಿದನು ಬುಧರು
ಜರೆದು ನಗುವರೇಂ ।
ಸನ್ನೆಯಿಂದೆ ಪಸುಳೆಯುಲಿಯೆ
ಪಿರಿಯರೊಲಿಯರೇಂ ॥ ೧೦ ॥
ಎನ್ನ ಮನೆಯೊಳೆಸೆದ ಬೆಳಕೆ
ಎನ್ನ ಬದುಕಿನೊಂದು ಸಿರಿಯೆ
ನಿನ್ನನಿನಿಸು ಹರುಷಗೊಳಿಸೆ
ಬರೆದ ಬರಹವ ।
ಇನ್ನದೆಂತು ನೋಡಿ ನಗುತ
ಲೊರೆವೆ ಸರಸವ ॥ ೧೧ ॥
ಕಿರಿಯ ಮಕ್ಕಳಳುವ ದನಿಗೆ
ಪಿರಿಯರಿಡುವ ಕಣ್ಣ ಪನಿಗೆ
ಕರಗದೆದೆಯ ಬಿದಿಯು ಬಣಗು
ಕವಿತೆಗೊಲಿವನೇಂ ।
ಮರುಳು ನುಡಿಯನಿದನು ನಿನ್ನ
ಕಿವಿಯೊಳುಲಿವನೇಂ ॥ ೧೨ ॥
ಇರಲಿ; –ಜಗದಿ ಜನರು ಕಣ್ಗೆ
ದೊರೆಯದೊಂದ ನೆನೆದು ಕುಸುಮ
ವಿರಿಸಿ ಪೂಜೆಗೈದೆವೆಂದು
ನಲವ ತಾಳ್ವವೊಲ್ ।
ಕೊರಗಿ ನಿನ್ನ ನೆನಪಿಗಿದನು
ಸಲಿಪೆನಳ್ತಿಯೊಳ್ ॥ ೧೩ ॥
ನೆನಪು ನಿನ್ನ ಬಾಳ್ಕೆಯಮಲ
ಗುಣದ ಸೊಬಗ ಪಡೆಯಲಾಗ
ಮಣಿಯ ಮಿಸುನಿಯೊಡನೆ ಕೂಡಿ
ಮಿರುಗುವಂದವು ।
ವನದಿ ಸುರಭಿ ಕಲನವಂಗ
ಳಿರುವ ಚೆಂದವು ॥ ೧೪ ॥
ದೈವ ಕೃತಿಯ ಸೊಬಗ ಸರಸ
ಭಾವತತಿಯ ಸೊಬಗ ಸುಜನ
ಜೀವ ಕಥೆಯ ಸೊಬಗ ಬರಿಯ
ಕನಸದೆಂಬರೇಂ ।
ಬೇವ ಮನವ ಸೊಬಗಿನೊಂದು
ನೆನಪೆ ತಣಿಸದೇಂ ॥ ೧೫ ॥
ನೀಲ ಪಟದಿ ವಿವಿಧ ರೂಪ
ಜಾಲಗಳನು ಬಣ್ಣಿಸಿರ್ಪ
ಚಿತ್ರ ಚತುರನಾರ್ ।
ಕಾಲದಿಂದೆ ಮಾಸದಾ ವಿ
ಚಿತ್ರವೆಸಪನಾರ್ ॥ ೧ ॥
ಸುತ್ತ ಪೊಳೆವ ಶೈಲಗಣದ
ಕೊತ್ತಲಂಗಳಿಟ್ಟು ಕಡಲ
ಸುತ್ತುಗಟ್ಟಿ ಕೋಟೆಯಿದನು
ಕಲ್ಪಿಸಿರ್ಪನಾರ್ ।
ವಸ್ತುಚಯವನಿಂತು ರಚಿಪ
ಶಿಲ್ಪಿವರ್ಯನಾರ್ ॥ ೨ ॥
ಗಿರಿಯ ತೊರೆಯ ಬನದ ಹೊಲದ
ಬೆರಗಿನಿಂದೆ ಮೃಗದ ಖಗದ
ಮೆರೆತದಿಂದಲೀ ವಿಹಾರ
ಭವನವೆಸಪನಾರ್ ।
ಮರೆಯಲಿರ್ದು ಸೊಗವನಿಂತು
ಕವಿಸುತಿರ್ಪನಾರ್ ॥ ೩ ॥
ಜ್ಯೋತಿಗಳನು ಗಗನ ತಲದಿ
ಗೀತಗಳನು ವಿಹಗ ಮುಖದಿ
ಪ್ರೀತಿಗಳನು ಜನದ ಮನದಿ
ತೋರುತಿರ್ಪನಾರ್ ।
ಮಾತನುಳಿದ ಕವಿತೆಯಿಂತು
ಬೀರುತಿರ್ಪನಾರ್ ॥ ೪ ॥
ಅವನ ಕೃತಿಯ ನೋಡಿ ಮಣಿವೆ
ವವನ ದನಿಯ ಕೇಳೆ ನಲಿವೆ
ವವನ ಭಿಕ್ಷೆಯುಂಡು ಬೆಳೆವೆ
ವವನನರಿಯೆವು ।
ಅವನ ಲೀಲೆಗಳನು ಕಾಣ್ಬೆ
ವವನ ಕಾಣೆವು ॥ ೫ ॥
ರವಿಗೆ ಬೆಳಕ ಭುವಿಗೆ ಬಲವ
ಜವವ ವಾಯುಗೀವ ತೆರದಿ
ಕವಿಯ ವಚನಕವನೆ ಸರಸ
ಭಾವವೀವನು ।
ಅವನೆ ಶಿಲ್ಪ ಚಿತ್ರಕೃತಿಗೆ
ಜೀವವೀವನು ॥ ೬ ॥
ಪಿಡಿದು ಗುರುವೆನುತ್ತಲಾತ
ನಡಿಯ ಮನದೊಳವನ ಬಲದೆ
ನುಡಿಯಲರಿತ ಕವಿಯೆ ಜಗದಿ
ಧನ್ಯನು ।
ಮುಡುಪನವಗೆ ಸಲಿಪ ಶಿಲ್ಪಿ
ವರನೆ ಗಣ್ಯನು ॥ ೭ ॥
ಮನಕೆ ತೋರ್ಪೆ ಸೊಬಗನೆಲ್ಲ
ತನಗೆ ತುಷ್ಟಿಯಪ್ಪ ತೆರದಿ
ಜನಕೆ ನುಡಿಯಲರಿತ ಸುಕವಿ
ತಿಲಕನಾತನು ।
ಅನುವಿನಿಂದ ಬರೆವ ಕಲೆಯ
ಕಲಿತನಾತನು ॥ ೮ ॥
ಅನಿತು ಗುರುವಿನೊಲುಮೆಯಿಲ್ಲ
ವನಿತು ಮತಿಯೊಳೆಸಕಮಿಲ್ಲ
ವಿನಿಸು ಭಕುತಿ ಮಾತ್ರವೆನ್ನ
ನುಡಿಸುತಿರ್ಪುದು ।
ಜನುಮ ಭುವಿಯ ಮಮತೆ ಬಾಯ
ಬಿಡಿಸುತಿರ್ಪುದು ॥ ೯ ॥
ಉನ್ನತಾಚಲವನು ಮಸಕು
ಗನ್ನಡಿಯಲಿ ತೋರಲೆಳಸು
ವೆನ್ನಕಜ್ಜವಿದನು ಬುಧರು
ಜರೆದು ನಗುವರೇಂ ।
ಸನ್ನೆಯಿಂದೆ ಪಸುಳೆಯುಲಿಯೆ
ಪಿರಿಯರೊಲಿಯರೇಂ ॥ ೧೦ ॥
ಎನ್ನ ಮನೆಯೊಳೆಸೆದ ಬೆಳಕೆ
ಎನ್ನ ಬದುಕಿನೊಂದು ಸಿರಿಯೆ
ನಿನ್ನನಿನಿಸು ಹರುಷಗೊಳಿಸೆ
ಬರೆದ ಬರಹವ ।
ಇನ್ನದೆಂತು ನೋಡಿ ನಗುತ
ಲೊರೆವೆ ಸರಸವ ॥ ೧೧ ॥
ಕಿರಿಯ ಮಕ್ಕಳಳುವ ದನಿಗೆ
ಪಿರಿಯರಿಡುವ ಕಣ್ಣ ಪನಿಗೆ
ಕರಗದೆದೆಯ ಬಿದಿಯು ಬಣಗು
ಕವಿತೆಗೊಲಿವನೇಂ ।
ಮರುಳು ನುಡಿಯನಿದನು ನಿನ್ನ
ಕಿವಿಯೊಳುಲಿವನೇಂ ॥ ೧೨ ॥
ಇರಲಿ; –ಜಗದಿ ಜನರು ಕಣ್ಗೆ
ದೊರೆಯದೊಂದ ನೆನೆದು ಕುಸುಮ
ವಿರಿಸಿ ಪೂಜೆಗೈದೆವೆಂದು
ನಲವ ತಾಳ್ವವೊಲ್ ।
ಕೊರಗಿ ನಿನ್ನ ನೆನಪಿಗಿದನು
ಸಲಿಪೆನಳ್ತಿಯೊಳ್ ॥ ೧೩ ॥
ನೆನಪು ನಿನ್ನ ಬಾಳ್ಕೆಯಮಲ
ಗುಣದ ಸೊಬಗ ಪಡೆಯಲಾಗ
ಮಣಿಯ ಮಿಸುನಿಯೊಡನೆ ಕೂಡಿ
ಮಿರುಗುವಂದವು ।
ವನದಿ ಸುರಭಿ ಕಲನವಂಗ
ಳಿರುವ ಚೆಂದವು ॥ ೧೪ ॥
ದೈವ ಕೃತಿಯ ಸೊಬಗ ಸರಸ
ಭಾವತತಿಯ ಸೊಬಗ ಸುಜನ
ಜೀವ ಕಥೆಯ ಸೊಬಗ ಬರಿಯ
ಕನಸದೆಂಬರೇಂ ।
ಬೇವ ಮನವ ಸೊಬಗಿನೊಂದು
ನೆನಪೆ ತಣಿಸದೇಂ ॥ ೧೫ ॥
Friday, 2 February 2024
ಕೇತಕೀ-ಕೇದಗೆ - ಕೇತಕೀವನ - ಡಿವಿಜಿ
ಮನಕೆ ಮತ್ತೀ ಗಂಧ
ತನುವು ಚೆಂಬೊನ್ನಂದ
ವನಸುಮ ಮಧುಸ್ಯಂದ
ಏನೆನ್ನ ಭಾಗ್ಯ!
ಎಷ್ಟೆಲ್ಲಿ ಭೋಗ್ಯ!
ಔತಣವು ತನಗೆಂದು
ಆತುರದಿ ಮರಿದುಂಬಿ
ಕೀರ್ತಿ ಬಣ್ಣವ ನಂಬಿ
ಕೇತಕಿಗೆ ತುತ್ತು
ಕ್ಷುತ್ತಿಂಗೆ ಮಿತ್ತು
ಧೂಳ್ ಕಣ್ಣ ಕವಿದು
ಮುಳ್ ರಕ್ಕೆ ಹರಿದು
ಲದ್ದಿ ತುಟಿ ಬಿಗಿದು
ಮಧುಪಂಗೆ ಮಸಣ
ವಿಧಿಗದುವೆ ಹಸನ
ಜೀವ ವಿಭ್ರಾಂತಿ
ಸಾಕೆ ವಿಶ್ರಾಂತಿ.
*************
ತನುವು ಚೆಂಬೊನ್ನಂದ
ವನಸುಮ ಮಧುಸ್ಯಂದ
ಏನೆನ್ನ ಭಾಗ್ಯ!
ಎಷ್ಟೆಲ್ಲಿ ಭೋಗ್ಯ!
ಔತಣವು ತನಗೆಂದು
ಆತುರದಿ ಮರಿದುಂಬಿ
ಕೀರ್ತಿ ಬಣ್ಣವ ನಂಬಿ
ಕೇತಕಿಗೆ ತುತ್ತು
ಕ್ಷುತ್ತಿಂಗೆ ಮಿತ್ತು
ಧೂಳ್ ಕಣ್ಣ ಕವಿದು
ಮುಳ್ ರಕ್ಕೆ ಹರಿದು
ಲದ್ದಿ ತುಟಿ ಬಿಗಿದು
ಮಧುಪಂಗೆ ಮಸಣ
ವಿಧಿಗದುವೆ ಹಸನ
ಜೀವ ವಿಭ್ರಾಂತಿ
ಸಾಕೆ ವಿಶ್ರಾಂತಿ.
*************
ಗಂಧಾಢ್ಯಾ ಸಾ ಭುವನವಿದಿತಾ ಕೇತಕೀಸ್ವರ್ಣಪರ್ಣಾ ।
ತೋಯಭ್ರಾಂತ್ಯಾ ಕ್ಷುದಿತಮಧುಪಃ ಪುಷ್ಪಮಧ್ಯೇ ಪಪಾತ ॥
ಅಂಧೀಭೂತಃ ಕುಸುಮರಜಸಾ ಕಂಟಕೈಶ್ಛಿನ್ನ ಪಕ್ಷಃ ।
ಸ್ಥಾತುಂ ಗಂತುಂ ದ್ವಯಮಪಿ ಸಖೇ ನೈವಶಕ್ತೋ ದ್ವಿರೇಫಃ ॥
ಕಾವ್ಯ - ಕೇತಕೀವನ - ಡಿವಿಜಿ
ಹೃದಯಂ ಹೃದಯದೊಡಂ ಸಂ-
ವದಿಸುತೆ ಬದುಕಿರ್ಪ ಮನೆಯ ಮೊಡಕೊಂದರೊಳಿಂ* ।
ಮುದ ಖೇದ ಕರುಬು ಬೆರಗುಗ-
ಳೆದೆಯೊತ್ತನುಭವಕೆತರುವ ವಾಕ್ಯಮೆ ಕಾವ್ಯಂ ॥
ರುದಿತವ ಮುದಿತವ ಮಾನವ
ಹೃದಯದ ವಿಲಸಿತವನೆಲ್ಲ ಶಬ್ದವಿಭವದಿನೆ- ।
ಮ್ಮೆದೆಗನುಭವವಾಗಿಪ್ಪಾ
ಪದಯೋಗಮೆ ಕಾವ್ಯಮದುವೆ ಜೀವಕೆ ಭವ್ಯಂ ॥
ಕಾವ್ಯಂ ಹೃತ್ಸಂಭಾವ್ಯಂ
ಸೇವ್ಯಂ ಸರ್ವಾಂತರಂಗ ಪರಿಪಾಕಿಗೆ ತಾಂ ।
ಜೈವ್ಯಂ ಜೀವನಸಾರಂ
ಜೈವ್ಯಂ ಪ್ರಭವ ಪ್ರಸಾದ ಮಹಿಮೆಗಳಿಂದಂ ॥
ವದಿಸುತೆ ಬದುಕಿರ್ಪ ಮನೆಯ ಮೊಡಕೊಂದರೊಳಿಂ* ।
ಮುದ ಖೇದ ಕರುಬು ಬೆರಗುಗ-
ಳೆದೆಯೊತ್ತನುಭವಕೆತರುವ ವಾಕ್ಯಮೆ ಕಾವ್ಯಂ ॥
ರುದಿತವ ಮುದಿತವ ಮಾನವ
ಹೃದಯದ ವಿಲಸಿತವನೆಲ್ಲ ಶಬ್ದವಿಭವದಿನೆ- ।
ಮ್ಮೆದೆಗನುಭವವಾಗಿಪ್ಪಾ
ಪದಯೋಗಮೆ ಕಾವ್ಯಮದುವೆ ಜೀವಕೆ ಭವ್ಯಂ ॥
ಕಾವ್ಯಂ ಹೃತ್ಸಂಭಾವ್ಯಂ
ಸೇವ್ಯಂ ಸರ್ವಾಂತರಂಗ ಪರಿಪಾಕಿಗೆ ತಾಂ ।
ಜೈವ್ಯಂ ಜೀವನಸಾರಂ
ಜೈವ್ಯಂ ಪ್ರಭವ ಪ್ರಸಾದ ಮಹಿಮೆಗಳಿಂದಂ ॥
Thursday, 1 February 2024
ಪ್ರೇಮ - ಕೇತಕೀವನ - ಡಿವಿಜಿ
ಜನನಾಂತರ ಋಣಶೇಷಂ
ಮನಸಿನ ಗಹ್ವರದೊಳುದಿಸಿ ತನ್ನಂ ಪೋಲ್ವಾ ।
ಋಣಕಾಂಡದೊಳವಲಂಬನೆ
ತನಗಪ್ಪನ್ನಂ ನಿಜ ಪ್ರಣಯ ಲತೆ ಬೆಳೆಗುಂ ॥
ಪ್ರೇಮಂ ಜೀವಿತ ಕುಸುಮಂ
ಸಾಮೋದಂ ಸಕಲ ಜೈವ ಸಾರ ಪರಾಗಂ ।
ಮಾಮಕತೆಯ ಕಲಿಸಿ ತೊಳೆವುದ
ದಾಮರಕಂ ತೀರ್ಥಮದರವೊಲ್ ಪೆರತುಂಟೇ ॥
ನಾಮಿರ್ವರೆನ್ನುತಿದ್ದರ್
ನಾಮೀರ್ವರೆ ಕೂಡಲೊರ್ವನಂತಹರೀಗಳ್ ।
ಪ್ರೇಮದ ಬೆರಗಿನ ಮಾಟಮ
ದಾಮಿಷಮಾತ್ರದಿನೆ ನಡೆವ ಮಾಳ್ಕೆಯದಲ್ಲಂ ॥
ಜೀವಾನ್ಯೋನ್ಯ ವಿಭಾವಂ
ಪಾವಕಮುಭಯರ್ಗಮಾತ್ಮಲಾಭ ವಿಧಾನಂ ।
ದೈವಿಕಮದಮಾನುಷ್ಯಂ
ಆವಶ್ಯಕಯಂತ್ರಮಾತ್ಮವಿಸ್ತರ ನಯದೊಳ್ ॥
ಪ್ರೇಮಂ ಜೀವಾನ್ಯೋನ್ಯಂ
ತಾಮರೆಜೀವಂಗಳೆರಡುಮೇಕದ ಭಾಗಂ ।
ಧಾಮಂ ತಮಗೊಂದೆನುವೊಲ್
ಕಾಮಿಸುತಿರಲದುವೆ ನಿಜದಿನಾದ ಪ್ರೇಮಂ ॥
ಮನಸಿನ ಗಹ್ವರದೊಳುದಿಸಿ ತನ್ನಂ ಪೋಲ್ವಾ ।
ಋಣಕಾಂಡದೊಳವಲಂಬನೆ
ತನಗಪ್ಪನ್ನಂ ನಿಜ ಪ್ರಣಯ ಲತೆ ಬೆಳೆಗುಂ ॥
ಪ್ರೇಮಂ ಜೀವಿತ ಕುಸುಮಂ
ಸಾಮೋದಂ ಸಕಲ ಜೈವ ಸಾರ ಪರಾಗಂ ।
ಮಾಮಕತೆಯ ಕಲಿಸಿ ತೊಳೆವುದ
ದಾಮರಕಂ ತೀರ್ಥಮದರವೊಲ್ ಪೆರತುಂಟೇ ॥
ನಾಮಿರ್ವರೆನ್ನುತಿದ್ದರ್
ನಾಮೀರ್ವರೆ ಕೂಡಲೊರ್ವನಂತಹರೀಗಳ್ ।
ಪ್ರೇಮದ ಬೆರಗಿನ ಮಾಟಮ
ದಾಮಿಷಮಾತ್ರದಿನೆ ನಡೆವ ಮಾಳ್ಕೆಯದಲ್ಲಂ ॥
ಜೀವಾನ್ಯೋನ್ಯ ವಿಭಾವಂ
ಪಾವಕಮುಭಯರ್ಗಮಾತ್ಮಲಾಭ ವಿಧಾನಂ ।
ದೈವಿಕಮದಮಾನುಷ್ಯಂ
ಆವಶ್ಯಕಯಂತ್ರಮಾತ್ಮವಿಸ್ತರ ನಯದೊಳ್ ॥
ಪ್ರೇಮಂ ಜೀವಾನ್ಯೋನ್ಯಂ
ತಾಮರೆಜೀವಂಗಳೆರಡುಮೇಕದ ಭಾಗಂ ।
ಧಾಮಂ ತಮಗೊಂದೆನುವೊಲ್
ಕಾಮಿಸುತಿರಲದುವೆ ನಿಜದಿನಾದ ಪ್ರೇಮಂ ॥
ನವ ಮಣಿ ಸೂತ್ರ - ಕೇತಕೀವನ - ಡಿವಿಜಿ
ನವ ಮಣಿ ಸೂತ್ರ - ಕೇತಕೀವನ - ಡಿವಿಜಿ
ಎಲ್ಲರನಾಳುವನೆಲ್ಲರೊಳಿರುವಂ ।
ಸಲ್ಲಿಪೆನವನಿಗೆ ಜೀವಿತ ಸುಮವಂ ॥ ೧
ದೇವನ ಸೊತ್ತೀ ಜಗವೆನದಲ್ಲಂ ।
ಸೇವಕ ನಾನವನಿತ್ತುದನುಣುವೆಂ ॥ ೨
ಮನವಾಕ್ತನುಗಳ ಕರ್ಮಂ ಸರ್ವಂ ।
ದಿನ ನಿಶಿಯೆನ್ನಯ ಹರಿಕೈಂಕರ್ಯಂ ॥ ೩
ಗೃಹ ಕುಲ ಜನಪದ ನೀತಿ ನಿಯಮನಂ ।
ವಿಹಿತಂ ನರಜನ್ಮಕೆ ಸಂಸ್ಕರಣಂ ॥ ೪
ಎನ್ನದು ಕೃಷಿತಂ ದೈವಿಕ ಫಲಿತಂ ।
ಹಣ್ಣೋ ಹುಲ್ಲೋ ಸಮವೆನೆ ಕೊಳುವೆಂ ॥ ೫
ಗುಡಿಯ ಹಸಾದದವೊಲು ಕರ್ಮಫಲಂ ।
ಗುಡವೋ ಮೆಣಸೋ ಸಮದಿಂ ಗ್ರಾಹ್ಯಂ ॥ ೬
ಇಳೆ ದೇವೋದ್ಯಾನಂ ನೀಂ ಭೃತ್ಯಂ ।
ಕಳೆ ಪರಿ ನೀರೆರೆ ಕಾವುದು ಕೃತ್ಯಂ ॥ ೭
ಸಹಜದೆ ಪಶು, ಸಂಸ್ಕಾರದೆ ಪುರುಷಂ ।
ಇಹಪಥದಿ ಹರಿಸ್ಮೃತಿಯಿರೆ ಕುಶಲಂ ॥ ೮
ಗುರಿಯೊಂದೊಳ್ಕಜ್ಜಮಿರಲ್, ಸ್ವತೆಯಂ ।
ಮರೆಯಿಪುದದು ಜೀವಕೆ, ಶುಭದುದಯಂ ॥ ೯
ಲೋಕದ ತರುವಿಂ ಜೀವಿತ ಕುಸುಮಂ ।
ಲೋಕೇಶಾರ್ಚೆಗೆ ಪಾಲಿಸು ವನಮಂ ॥ ೧೦
ಎಲ್ಲರನಾಳುವನೆಲ್ಲರೊಳಿರುವಂ ।
ಸಲ್ಲಿಪೆನವನಿಗೆ ಜೀವಿತ ಸುಮವಂ ॥ ೧
ದೇವನ ಸೊತ್ತೀ ಜಗವೆನದಲ್ಲಂ ।
ಸೇವಕ ನಾನವನಿತ್ತುದನುಣುವೆಂ ॥ ೨
ಮನವಾಕ್ತನುಗಳ ಕರ್ಮಂ ಸರ್ವಂ ।
ದಿನ ನಿಶಿಯೆನ್ನಯ ಹರಿಕೈಂಕರ್ಯಂ ॥ ೩
ಗೃಹ ಕುಲ ಜನಪದ ನೀತಿ ನಿಯಮನಂ ।
ವಿಹಿತಂ ನರಜನ್ಮಕೆ ಸಂಸ್ಕರಣಂ ॥ ೪
ಎನ್ನದು ಕೃಷಿತಂ ದೈವಿಕ ಫಲಿತಂ ।
ಹಣ್ಣೋ ಹುಲ್ಲೋ ಸಮವೆನೆ ಕೊಳುವೆಂ ॥ ೫
ಗುಡಿಯ ಹಸಾದದವೊಲು ಕರ್ಮಫಲಂ ।
ಗುಡವೋ ಮೆಣಸೋ ಸಮದಿಂ ಗ್ರಾಹ್ಯಂ ॥ ೬
ಇಳೆ ದೇವೋದ್ಯಾನಂ ನೀಂ ಭೃತ್ಯಂ ।
ಕಳೆ ಪರಿ ನೀರೆರೆ ಕಾವುದು ಕೃತ್ಯಂ ॥ ೭
ಸಹಜದೆ ಪಶು, ಸಂಸ್ಕಾರದೆ ಪುರುಷಂ ।
ಇಹಪಥದಿ ಹರಿಸ್ಮೃತಿಯಿರೆ ಕುಶಲಂ ॥ ೮
ಗುರಿಯೊಂದೊಳ್ಕಜ್ಜಮಿರಲ್, ಸ್ವತೆಯಂ ।
ಮರೆಯಿಪುದದು ಜೀವಕೆ, ಶುಭದುದಯಂ ॥ ೯
ಲೋಕದ ತರುವಿಂ ಜೀವಿತ ಕುಸುಮಂ ।
ಲೋಕೇಶಾರ್ಚೆಗೆ ಪಾಲಿಸು ವನಮಂ ॥ ೧೦
To receive the posts on your personal email, pls subscribe to https://groups.google.com/g/todayskagga
Subscribe to:
Posts (Atom)